Get Updates
Get notified of breaking news, exclusive insights, and must-see stories!

ಅನುಕರಣೆಯಿಂದ ದೂರವಿರಿ ; ಹಾಡುಹಕ್ಕಿಗಳಿಗೆ ‘ಮನೋಹರ’ ಕರೆ

ಅನುಕರಣೆಯಿಂದ ದೂರವಿರಿ ; ಹಾಡುಹಕ್ಕಿಗಳಿಗೆ ‘ಮನೋಹರ’ ಕರೆ
ಗಾಯಕ ರಮೇಶ್‌ಚಂದ್ರರಿಂದ ಶಿವಮೊಗ್ಗ ಜಿಲ್ಲಾ ಪ್ರತಿಭೆಗಳ ಅನ್ವೇಷಣೆ

ಶಿವಮೊಗ್ಗ : ಜನಪ್ರಿಯ ಗಾಯಕರ ಧ್ವನಿಯನ್ನು ಅನುಸರಿಸುವ ಚಾಳಿಯಿಂದ ಉದಯೋನ್ಮುಖ ಹಾಡುಗಾರರು ಹೊರಬರಬೇಕೆಂದು ಪ್ರಸಿದ್ಧ ಸಂಗೀತ ನಿರ್ದೇಶಕ ವಿ.ಮನೋಹರ್‌ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಬೆಳಕಿಗೆ ಬರುತ್ತಿವೆ. ದೂರದರ್ಶನದಲ್ಲೂ ಅವಕಾಶಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರಕುತ್ತಿವೆ. ಅವಕಾಶಗಳ ಹೆಚ್ಚಳ ಹಾಗೂ ಹೊಸ ಪ್ರತಿಭೆಗಳ ಆಗಮನದ ಸಂಗತಿಗಳು ಆಶಾದಾಯಕ. ಆದರೆ, ಯುವ ಗಾಯಕರಲ್ಲಿ ಜನಪ್ರಿಯ ನಾಯಕರ ಧ್ವನಿಯನ್ನು ಅನುಕರಿಸುವ ಚಾಳಿ ಹೆಚ್ಚುತ್ತಿರುವುದು ಸರಿಯಾದ ಬೆಳವಣಿಗೆಯಲ್ಲಿ ಎಂದು ಮನೋಹರ್‌ ಹೇಳಿದರು.

ಗಾಯಕ ರಮೇಶ್‌ಚಂದ್ರರ ಸಂಗಮ ಕಲಾಕ್ಷೇತ್ರದ ಪ್ರಾರಂಭೋತ್ಸವ ಸಮಾರಂಭದಲ್ಲಿ ಮನೋಹರ್‌ ಭಾನುವಾರ (ಜೂ.27) ಮಾತನಾಡುತ್ತಿದ್ದರು.

ಸಂಗಮ ಕಲಾಕ್ಷೇತ್ರದ ಕುರಿತು ಮಾತನಾಡಿದ ರಮೇಶ್‌ಚಂದ್ರ- ಶಿವಮೊಗ್ಗ ಪ್ರದೇಶದ ಹಾಡುಹಕ್ಕಿಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ತಮ್ಮ ಉದ್ದೇಶವಾಗಿದೆ ಎಂದರು. ಆದಿಚುಂಚನಗಿರಿ ಮಠದ ಪ್ರಸನ್ನನಾಥ ಸ್ವಾಮೀಜಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಡಾ.ಡಿ.ಸಿ.ರಾಜಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+