ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಸಿಬಿಐ ದಾಳಿ ; ಬೆಂಗಳೂರಿನಲ್ಲಿ ‘ಆರೋಗ್ಯ’ ಪರಿಶೀಲನೆ

By Staff
|
Google Oneindia Kannada News

ದೇಶಾದ್ಯಂತ ಸಿಬಿಐ ದಾಳಿ ; ಬೆಂಗಳೂರಿನಲ್ಲಿ ‘ಆರೋಗ್ಯ’ ಪರಿಶೀಲನೆ
ದೇಶದ ವಿವಿಧ ಭಾಗಗಳಲ್ಲಿ ದಾಳಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯ ಪ್ರಕರಣ ದಾಖಲು

ಬೆಂಗಳೂರು : ಭ್ರಷ್ಟಾಚಾರ ನಿರ್ಮೂಲನೆ ವಿರುದ್ಧ ವ್ಯಾಪಕ ಆಂದೋಲನ ಕೈಗೊಂಡಿರುವ ಕೇಂದ್ರ ತನಿಖಾ ದಳ (ಸಿಬಿಐ) ದೇಶದ 74 ಪ್ರದೇಶಗಳಲ್ಲಿ ದಾಳಿ ನಡೆಸಿದ್ದು , ಬೆಂಗಳೂರಿನಲ್ಲೂ 5 ಕಚೇರಿಗಳ ಮೇಲೆ ದಾಳಿ ನಡೆಸಿದೆ.

ಬೆಂಗಳೂರಿನಲ್ಲಿ ಐದು ಆರೋಗ್ಯ ಸಂಸ್ಥೆಗಳ ಮೇಲೆ ಸಿಬಿಐ ಅಧಿಕಾರಿಗಳು ಜೂನ್‌ 25ರ ಶುಕ್ರವಾರ ದಾಳಿ ನಡೆಸಿದರು. ಈ ದಾಳಿಯಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಹಾಗೂ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಸಿಬಿಐ ಎಸ್‌ಪಿ ಬಿಜು ಜೋಸೆಫ್‌ ನೇತೃತ್ವದ ತಂಡ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ (ಬಳ್ಳಾರಿ ರಸ್ತೆ ), ರಾಷ್ಟ್ರೀಯ ಕ್ಷಯ ರೋಗಗಳ ಸಂಸ್ಥೆ (ಬಳ್ಳಾರಿ ರಸ್ತೆ) , ಕೇಂದ್ರ ಸರ್ಕಾರದ ಆರೋಗ್ಯ ವಿಜ್ಞಾನ ಸಂಸ್ಥೆಯ ಹೆಚ್ಚುವರಿ ಮಹಾ ನಿರ್ದೇಶಕರ ಕಚೇರಿ (ಕೋರಮಂಗಲ), ವೆಲ್‌ಫೇರ್‌ ಕಮೀಷನರ್‌ ಕಚೇರಿ (ಮಿಲ್ಲರ್‌ ರಸ್ತೆ ) ಹಾಗೂ ಎಚ್‌ಎಎಲ್‌ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿತು.

ಕೆಲವು ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದ್ದು , ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ದೆಹಲಿ ವರದಿ : ಬ್ಯಾಂಕ್‌, ಆದಾಯ ತೆರಿಗೆ, ಯುಟಿಐ, ವಿಮೆ, ಅಬಕಾರಿ ಸೇರಿದಂತೆ ವಿವಿಧ ಇಲಾಖೆಯ 74 ಅಧಿಕಾರಿಗಳ ಕಚೇರಿ ಮತ್ತು ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದ್ದು , 389 ಪ್ರಕರಣ ದಾಖಲಿಸಿಕೊಂಡಿದೆ ಎಂದು ಸಿಬಿಐ ನಿರ್ದೇಶಕ ಯು.ಎಸ್‌.ಮಿಶ್ರಾ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X