ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಕ್ಕೆಯಲ್ಲಿ ಧರ್ಮಸಿಂಗ್‌ ‘ತುಲಾಭಾರ’! ಅಂದಹಾಗೆ, ಅವರ ಭಾರ...

By Staff
|
Google Oneindia Kannada News

ಕುಕ್ಕೆಯಲ್ಲಿ ಧರ್ಮಸಿಂಗ್‌ ‘ತುಲಾಭಾರ’! ಅಂದಹಾಗೆ, ಅವರ ಭಾರ...
ಮುಖ್ಯಮಂತ್ರಿಗಳಿಂದ 102 ಕಿಲೋ ಒಣದ್ರಾಕ್ಷಿ ಸುಬ್ರಹ್ಮಣ್ಯನಿಗೆ ಅರ್ಪಣೆ

ಸುಬ್ರಹ್ಮಣ್ಯ : ಪ್ರಸಿದ್ಧ ಯಾತ್ರಾಸ್ಥಳ ಕುಕ್ಕೆಯ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ತುಲಾಭಾರ ಸೇವೆ ಸಲ್ಲಿಸಿದರು.

ಮುಖ್ಯಮಂತ್ರಿ ಧರ್ಮಸಿಂಗ್‌ರ ತೂಕದಷ್ಟು ಒಣ ದ್ರಾಕ್ಷಿಯನ್ನು ತುಲಾಭಾರದ ಮೂಲಕ ಕುಕ್ಕೆ ಸುಬ್ರಹ್ಮಣ್ಯನಿಗೆ ಅರ್ಪಿಸಲಾಯಿತು. ಜೂನ್‌ 24ರ ಗುರುವಾರ ಬೆಳಗ್ಗೆ ಈ ತುಲಾಭಾರ ಕಾರ್ಯಕ್ರಮ ನಡೆಯಿತು. ಅಂದಹಾಗೆ, ಧರ್ಮಸಿಂಗ್‌ರ ತೂಕ 102 ಕಿಲೋ. ತುಲಾಭಾರಕ್ಕೆ ಬಳಸಿದ ಇಷ್ಟೂ ದ್ರಾಕ್ಷಿ ಧರ್ಮಸಿಂಗ್‌ರ ಸ್ವಂತ ಜಮೀನಿನಲ್ಲಿ ಬೆಳೆದದ್ದೆನ್ನುವುದು ಇನ್ನೊಂದು ವಿಶೇಷ. ತುಲಾಭಾರದ ನಂತರ ವಿಶೇಷ ಪೂಜೆಯಲ್ಲೂ ಧರ್ಮಸಿಂಗ್‌ ಪಾಲ್ಗೊಂಡಿದ್ದರು.

ಮುಖ್ಯಮಂತ್ರಿ ಧರ್ಮಸಿಂಗ್‌ ಹರಕೆ ಸಂದಾಯ ಮಾಡಲು ಬಂದಿದ್ದಾರೆ. ಮುಖ್ಯಮಂತ್ರಿಯಾದರೆ ತುಲಾಭಾರ ಸಲ್ಲಿಸುವುದಾಗಿ ಅವರು ಸುಬ್ರಹ್ಮಣ್ಯನಲ್ಲಿ ಹರಸಿಕೊಂಡಿದ್ದರು ಎಂದು ದೇಗುಲದ ಪ್ರಧಾನ ಅರ್ಚಕ ಜೋಗಿತ್ತಾಯ ಪೂಜಾಕಾರ್ಯಗಳ ನಂತರ ಸುದ್ದಿಗಾರರಿಗೆ ತಿಳಿಸಿದರು.

ಬೆಂಗಳೂರಿಗೆ ವಾಪಸ್ಸಾಗುವ ಮುನ್ನ ಉಪ್ಪಿನಂಗಡಿ ಸಮೀಪದ ಕೊಕ್ಕಡದಲ್ಲಿನ ಜೋಗಿತ್ತಾಯರ ಮನೆಗೆ ಮುಖ್ಯಮಂತ್ರಿ ಧರ್ಮಸಿಂಗ್‌ ಭೇಟಿ ನೀಡಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X