ಕರುನಾಡ ಸಂಜೆ ಬಳಗದ ಮುಂಜಾವಿನ ದೈನಿಕ ‘ಸೂರ್ಯೋದಯ’
ಕರುನಾಡ
ಸಂಜೆ
ಬಳಗದ
ಮುಂಜಾವಿನ
ದೈನಿಕ
‘ಸೂರ್ಯೋದಯ’
ಚುನಾವಣೆ-2004ರಲ್ಲಿ
ಮಾಧ್ಯಮ
ಪಾತ್ರದ
ಕುರಿತು
ಕಿಡಿಕಾರಿದ
ದೇವೇಗೌಡ
ಹಳೆಯ ಕಹಿಯನ್ನೆಲ್ಲ ಮರೆತು ಉತ್ತಮ ಸರಕಾರ ನೀಡಬೇಕಾಗಿದೆ. ಅದಕ್ಕಾಗಿ ನಾವೆಲ್ಲ ಒಂದಾಗಿ ನಡೆಯಬೇಕಾಗಿದೆ. ಧರ್ಮಸಿಂಗ್ ಮತ್ತು ಸಿದ್ಧರಾಮಯ್ಯ ಅವರುಗಳ ಕಷ್ಟ ಏನೆಂದು ನನಗೆ ತಿಳಿದಿದೆ. ಅದಕ್ಕಾಗಿ ನಾನು ಹಿಂದಿನ ಸರಕಾರದ ತಪ್ಪುಗಳನ್ನು ಎತ್ತಿ ಹಿಡಿಯುತ್ತಿಲ್ಲ ಎಂದು ದೇವೇಗೌಡ ಹೇಳಿದರು.
ಚುನಾವಣೆಗೆ ಮುನ್ನ ನಾವು ಜೀವಂತವಾಗಿ ಇದ್ದೇವೆ ಎಂದು ಯಾವ ಮಾಧ್ಯಮದವರೂ ಗುರುತಿಸಿಲ್ಲ. ಅವರ ಪಾಲಿಗೆ ನಾವು ಸತ್ತು ಹೋಗಿದ್ದೆವು. ಇಲ್ಲೊಂದು ರೈತರ, ಕುರಿ ಕಾಯುವವನ, ಬಡವನ ಪಕ್ಷವಿದೆ ಎಂದು ಯಾರಿಗೂ ತಿಳಿದಿರಲಿಲ್ಲ. ದೇವೇಗೌಡ ‘ಡೆಡ್ ಯಾಂಡ್ ಗೋನ್’ ಎಂಬಂತೆ ಟಿವಿ ಮಾಧ್ಯಮಗಳು ಬಿಂಬಿಸಿದವು. ನಾನು ಬದ್ದಿಜೀವಿಗಳ ಮಾತನ್ನು ಕೇಳ್ತೇನೆ, ಆದರೆ ಅವರೇ ಸರ್ವಶ್ರೇಷ್ಠರಲ್ಲ ಎಂದು ಚುನಾವಣಾ ಸಂದರ್ಭದ ಕಹಿ ನೆನಪುಗಳನ್ನು ತೋಡಿಕೊಂಡರು.
ಕಾರ್ಯಕ್ರಮದಲ್ಲಿ ಬೃಹನ್ಮಠದ ಶಿವಮೂರ್ತಿ ಮುರುಗ ರಾಜೇಂದ್ರ ಶರಣರು, ನಿವೃತ್ತ ನ್ಯಾಯಾಧೀಶ ಎಚ್.ಜಿ. ಬಾಲಕೃಷ್ಣ, ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಗಂಗಾಧರ, ಪತ್ರಿಕೆಯ ಸಂಪಾದಕ ಅರ್ಜುನ್ ದೇವ್ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು