ಜೋಗದ ಗುಂಡಿಯಲ್ಲಿ ‘ಕಾಮನಬಿಲ್ಲು’ ಮೂಡಿದೆ, ನೀವು ಕಂಡಿರಾ?
ಜೋಗದ
ಗುಂಡಿಯಲ್ಲಿ
‘ಕಾಮನಬಿಲ್ಲು’
ಮೂಡಿದೆ,
ನೀವು
ಕಂಡಿರಾ?
ಎಲ್ಲ
ದಾರಿಗಳು
ಜೋಗದ
ಸಿರಿಯ
ಕಡೆಗೆ....
ರಾಜ್ಯದ ಪ್ರವಾಸಿಗರು ಹಾಗೂ ದೇಶದ ವಿವಿಧ ಭಾಗಗಳಿಂದ ರಾಜ್ಯಕ್ಕೆ ಆಗಮಿಸುವ ಸಾವಿರಾರು ಪ್ರವಾಸಿಗರಿಗೀಗ ಜಾಗತಿಕ ಖ್ಯಾತಿಯ ಜೋಗ ಜಲಪಾತವೇ ಆಕರ್ಷಣೆಯ ಕೇಂದ್ರ. ರಭಸದಿಂದ ಧುಮ್ಮಿಕ್ಕುವ ಜೋಗದ ಗುಂಡಿಯ ಕವಲುಧಾರೆಗಳು ಕಣ್ತುಂಬಿದಾಗ- ಮೂಗೂರು ಮಲ್ಲಪ್ಪ ಹಾಡಿದಂತೆ ಜನುಮ ಧನ್ಯವಾದ ಅನುಭವ.
ಬಸ್ಸುಗಳು, ಕಾರುಗಳು ಮಾತ್ರವಲ್ಲದೆ ದ್ವಿಚಕ್ರ ವಾಹನಗಳಲ್ಲೂ ಪ್ರವಾಸಿಗರು ಜೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಪ್ರವಾಸಿ ಸೌಲಭ್ಯಗಳ ಕೊರತೆಯಿದ್ದರೂ, ಜೋಗದ ಸಿರಿ ಬೆಳಕು ಎಲ್ಲ ಕುಂದುಗಳನ್ನೂ ಮುಚ್ಚಿ ಹಾಕುವಷ್ಟು ಪ್ರಬಲವಾಗಿದೆ. ಕಳೆದೆರಡು ಭಾನುವಾರಗಳಲ್ಲಂತೂ ಜೋಗದಲ್ಲಿ ಜಾತ್ರೆಯ ವಾತಾವರಣ, ಸಂಭ್ರಮ.
ಕಳೆದ ಮೂರು ವರ್ಷಗಳ ಬರಗಾಲದಿಂದಾಗಿ ಬತ್ತಿದ ಜೋಗ ತನ್ನ ಖ್ಯಾತಿಯನ್ನು ಕಳಕೊಂಡಿತ್ತು . ಆದರೆ ಈ ಬಾರಿ ಸುರಿದ ಉತ್ತಮ ಮಳೆಯಿಂದಾಗಿ ಜಲಪಾತದಲ್ಲಿ ಗಂಗಾವತರಣ ಉಂಟಾಗಿದ್ದು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.
ನೀರಿನ ಬಾಗು ಬಳುಕು ಉಕ್ಕು ಹಾಗೂ ಸೂರ್ಯ ರಶ್ಮಿಯ ಚೆನ್ನಾಟದಿಂದಾಗಿ ಕೆಲವೊಮ್ಮೆ ಜಲಪಾತದ ಪರಿಸರದಲ್ಲಿ ಕಾಮನಬಿಲ್ಲು ಮೂಡುವುದೂ ಉಂಟು. ಆಗ ನೋಡಬೇಕು ಜಲಪಾತದ ಚೆಂದವನ್ನು !
ಅಂದಹಾಗೆ, ನೀವಿನ್ನೂ ಜೋಗದ ಕಡೆ ಹೊಂಟಿಲ್ಲವಾ ? ಬೇಗ ಹೊರಡಿ ; ಜೋಗವ ನೋಡದ ಮೇಲೆ ಅದ್ಯಾತರ ಜನುಮ ? ಕವಿವಾಣಿ ನೆನಪಿದೆ ತಾನೆ ?
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು