ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪಾಲದಲ್ಲಿ ಕರುಳು ಬೇನೆಗೆ ಬೀಜ ಬಿತ್ತಿದ ಕಸ- ಚರಂಡಿ ಸಮುದ್ರ

By Staff
|
Google Oneindia Kannada News

ಮಣಿಪಾಲದಲ್ಲಿ ಕರುಳು ಬೇನೆಗೆ ಬೀಜ ಬಿತ್ತಿದ ಕಸ- ಚರಂಡಿ ಸಮುದ್ರ
ಕಾಲರಾ ಪೀಡಿತರಲ್ಲಿ ಕೆಎಂಸಿ ಆಸ್ಪತ್ರೆ ಸಿಬ್ಬಂದಿ-ವಿದ್ಯಾರ್ಥಿಗಳೂ ಇದ್ದಾರೆ !

ಮಣಿಪಾಲ : ಉಡುಪಿ ಜಿಲ್ಲೆಯ ಮಣಿಪಾಲದ ಸುತ್ತಮುತ್ತಲ ಪ್ರದೇಶಗಳಲ್ಲಿ ಕರುಳುಬೇನೆ ವ್ಯಾಪಕವಾಗಿದ್ದು , ದಿನದಿಂದ ದಿನಕ್ಕೆ ಕಾಲರಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಣಿಪಾಲದ ಕಸ್ತೂರಬಾ ಮೆಡಿಕಲ್‌ ಕಾಲೇಜು (ಕೆಎಂಸಿ) ಆಸ್ಪತ್ರೆಯಲ್ಲಿ ಈವರೆಗೆ 18 ರೋಗಿಗಳು ಕಾಲರಾ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಮಣಿಪಾಲದ ಆಸುಪಾಸಲ್ಲಿ ಕಾಲರಾ ವ್ಯಾಪಕವಾಗುತ್ತಿರುವ ವಿಷಯವನ್ನು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಸಮರ್ಪಕ ಚರಂಡಿ ವ್ಯವಸ್ಥೆ ಹಾಗೂ ಕಸದ ಸಂಗ್ರಹವೇ ಕಾಲರಾ ವ್ಯಾಪಕರವಾಗಲು ಕಾರಣವಾಗಿದೆ.

ಮಣಿಪಾಲದಲ್ಲಿ ಹೊಟೇಲುಗಳ ತ್ಯಾಜ್ಯಗಳ ವಿಲೇವಾರಿ ಸಮರ್ಪಕ ರೀತಿಯಲ್ಲಿ ನಡೆಯುತ್ತಿಲ್ಲ . ಇಷ್ಟೇ ಸಾಲದೆನ್ನುವಂತೆ ಕೆಎಂಸಿ ಆಸ್ಪತ್ರೆ ಕ್ಯಾಂಟೀನು ಕೂಡ ಕಸದ ಸಮುದ್ರಕ್ಕೆ ತನ್ನ ಪಾಲು ಸಲ್ಲಿಸುತ್ತಿದೆ. ಕಾಲರಾ ಪೀಡಿತರಲ್ಲಿ ಕೆಎಂಸಿ ಆಸ್ಪತ್ರೆ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿರುವುದು ವಿಶೇಷ.

ಕಾಲರಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಆರೋಗ್ಯ ಇಲಾಖೆ ತೊಡಗಿದ್ದು , ಬಿಸಿ ಆಹಾರ ಹಾಗೂ ನೀರನ್ನು ಮಾತ್ರ ಸೇವಿಸುವಂತೆ ನಾಗರಿಕರಿಗೆ ಸಲಹೆ ಮಾಡಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X