ರೈತರಿಗೆ ‘ಕೈಮರ’ : ಹಳ್ಳಿಗಳಲ್ಲಿ ಇಸ್ರೋದಿಂದ 100 ಉಪಗ್ರಹ ಕೇಂದ್ರ
ರೈತರಿಗೆ ‘ಕೈಮರ’ : ಹಳ್ಳಿಗಳಲ್ಲಿ ಇಸ್ರೋದಿಂದ 100 ಉಪಗ್ರಹ ಕೇಂದ್ರ
ಉಪಗ್ರಹ ಕೇಂದ್ರಗಳ ಮೂಲಕ ಹವಾಮಾನ, ಕೃಷಿ ಮಾಹಿತಿ ಪೂರೈಕೆ
ಉಪಗ್ರಹ ಕೇಂದ್ರಗಳ ಮೂಲಕ ಗ್ರಾಮೀಣ ಪ್ರದೇಶಗಳ ಜನರಿಗೆ ಸೂಕ್ತ ಮಾಹಿತಿಗಳನ್ನು ಒದಗಿಸುವ ದಿಶೆಯಲ್ಲಿ ಇಸ್ರೋ ಹೊಸ ಅಧ್ಯಾಯದ ರಚನೆಗೆ ಮುಂದಾಗಿದ್ದು - ಕರ್ನಾಟಕ, ತಮಿಳುನಾಡು, ಮತ್ತು ಕೆಲ ಉತ್ತರ ಪೂರ್ವ ರಾಜ್ಯಗಳ ಗ್ರಾಮೀಣಪ್ರದೇಶಗಳಲ್ಲಿ 100 ಉಪಗ್ರಹ ಮಾಹಿತಿ ಕೇಂದ್ರಗಳನ್ನು 2004 ರ ಅಂತ್ಯದೊಳಗೆ ಸ್ಥಾಪಿಸಲಿದೆ . ಇಸ್ರೋದ ಅಧ್ಯಕ್ಷ ಜಿ. ಮಾಧವನ್ ನಾಯರ್ ಈ ವಿಷಯವನ್ನು ಶುಕ್ರವಾರ ತಿಳಿಸಿದರು. ಬರಗಾಲ ನಿರ್ವಹಣೆ ಬಗೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಾಯರ್ ಮಾತನಾಡುತ್ತಿದ್ದರು.
ರೈತರಿಗೆ ವ್ಯವಸಾಯದಲ್ಲಿ ಸೂಕ್ತ ವೈಜ್ಞಾನಿಕ ತಂತ್ರಗಳ ಅಳವಡಿಕೆ, ಉತ್ಪಾದಿಸಲಾದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ಹವಾಮಾನದ ವ್ಯತಿರಿಕ್ತತೆ ಮತ್ತು ಗ್ರಾಮೀಣ ಕಲಾಕಾರರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಇಸ್ರೋದ ಉದ್ದೇಶಿತ ಉಪಗ್ರಹ ಕೇಂದ್ರಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಮಾಧವನ್ ತಿಳಿಸಿದರು.
ಆಯಾ ಪ್ರದೇಶದ ಮಣ್ಣಿನ ತೇವಾಂಶಕ್ಕನುಗುಣವಾಗುವ, ಹೆಚ್ಚಿನ ಲಾಭ ತರುವ ಬೆಳೆಗಳ ಬಗ್ಗೆ ಮಾಹಿತಿ, ಟೆಲಿಮೆಡಿಸಿನ್( ಅಗತ್ಯ ಔಷಧಿಗಳ ಬಗ್ಗೆ ಅಂತರಜಾಲ ಮತ್ತು ತಂತ್ರಜ್ಞಾನಗಳ ಸಹಾಯದಿಂದ ಸೂಕ್ತ ತಿಳುವಳಿಕೆ ನೀಡುವುದು ) ವ್ಯವಸ್ಥೆಯನ್ನು ವಿಲೇಜ್ ರಿಸೋರ್ಸ್ ಸೆಂಟರ್ ಒದಗಿಸಲಿದೆ. ಇವೆಲ್ಲಕ್ಕೂ ಅಗತ್ಯವಿರುವ ಸಾಫ್ಟ್ವೇರ್ಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇನ್ನು ಕೇವಲ ಮೂರು ತಿಂಗಳೊಳಗೆ ಅಗತ್ಯ ತಂತ್ರಜ್ಞಾನವನ್ನು ನಿರ್ಮಿಸಿ, ವರ್ಷಾಂತ್ಯದೊಳಗೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದು ಮಾಧವನ್ ನಾಯರ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications