Get Updates
Get notified of breaking news, exclusive insights, and must-see stories!

ರಾಜ್ಯವು ಶೀಘ್ರವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಿ : ಗೌಡ

ರಾಜ್ಯವು ಶೀಘ್ರವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಿ : ಗೌಡ
ಪಕ್ಷ ಸಂಘಟನೆ ಬಲಪಡಿಸಲು ದೇವೇಗೌಡ ರಾಜ್ಯಾದ್ಯಂತ ಪ್ರವಾಸ

ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಯಾದ ಬಳಿಕ ಮೊತ್ತ ಮೊದಲಬಾರಿಗೆ ಮಾಜಿ ಪ್ರಧಾನಿ, ಜಾತ್ಯಾತೀತ ಜನತಾದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಜೂನ್‌19ರ ಶನಿವಾರ ಪತ್ರಿಕಾ ಸಂದರ್ಶನ ನೀಡಿದರು.

ಪತ್ರಿಕಾ ಸಂದರ್ಶನದಲ್ಲಿ ದೇವೇಗೌಡ ಹೇಳಿದ್ದು

ಅಕ್ಕಿ ಹಗರಣ

  • ಅಕ್ಕಿ ಹಗರಣ ತನಿಖೆಗೆ ಜಂಟಿ ಸದನ ಸಮಿತಿ ರಚಿಸಲು ಸರಕಾರ ನಿರಾಕರಿಸಿರುವುದರಲ್ಲಿ ತಪ್ಪೇನಿಲ್ಲ.
  • ಇದರಲ್ಲಿ ಜೆಡಿಎಸ್‌ ಪಾತ್ರ ಏನೇನೂ ಇಲ್ಲ. ಹಗರಣ ನಡೆದಾಗ ಜೆಡಿಎಸ್‌ ಆಡಳಿತ ಪಕ್ಷವಾಗಿರಲಿಲ್ಲ.
  • ಬಿಜೆಪಿ ಪ್ರಮುಖ ವಿರೋಧಿ ಪಕ್ಷವಾಗಿತ್ತು. ವಿರೋಧಿ ಪಕ್ಷದ ಕಾರ್ಯವೂ ಮುಖ್ಯವಾಗುತ್ತದೆ. ಅವರಿಗೆ ಹಗರಣದ ತನಿಖೆ ನಡೆಸಲೇ ಬೇಕೆಂದಿದ್ದರೆ ಸಿಬಿಐಗೆ ನೀಡಲು ಪಟ್ಟು ಹಿಡಿಯಲಿ.
ಸಮ್ಮಿಶ್ರ ಸರಕಾರ
  • ಗುಜರಾತ್‌ ಕುರಿತು ವಾಜಪೇಯಿಯೇ ಹೇಳಿಕೆ ನೀಡಿದ್ದಾರೆ. ಅಂದ ಮೇಲೆ ಕೋಮುವಾದಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಹೇಗೆ?
  • ರಾಜ್ಯದಲ್ಲಿ ನಿರ್ಮಾಣವಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಕೋಮುವಾದಿಗಳನ್ನು ಅಧಿಕಾರದಿಂದ ಹೊರಗಿಡಲು ಈ ಸಮ್ಮಿಶ್ರ ಸರಕಾರ ರಚನೆ
  • ಎರಡೂ ಪಕ್ಷಗಳು ಕುಳಿತು ಶೀಘ್ರವೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸ ಬೇಕು.
  • ಸಂಪುಟ ವಿಸ್ತರಣೆ ಮಾಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ.
  • ಪಕ್ಷ ಸಂಘಟನೆ ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ. ಇದರಿಂದ ಸಮ್ಮಿಶ್ರದ ಸರಕಾರದ ಮೇಲೆ ಯಾವುದೇ ಪರಿಣಾಮವಿಲ್ಲ
ಕಾವೇರಿ
  • ಕಾವೇರಿ ನೀರು ಬಿಟ್ಟಿರುವುದು ಬಾಂಧವ್ಯದ ಪ್ರತೀಕ.
  • ಕೇಂದ್ರಕ್ಕೆ ನೀಡಿದ ತನ್ನ ಬೆಂಬಲವನ್ನು ಬಳಸಿಕೊಂಡು ಡಿಎಮ್‌ಕೆ ಸರಕಾರದ ಮೇಲೆ ಒತ್ತಡ ತರಬಾರದು
  • ಪಕ್ಷವು ಕೇಂದ್ರದಲ್ಲಿ ರಾಜ್ಯದ ಹಿತಕಾಯಲು ಬದ್ಧ . ಸಂಸತ್ತಿನಲ್ಲಿ ಜೆಡಿಎಸ್‌ ಸಂಸದರ ಸಂಖ್ಯೆ ನಗಣ್ಯವಾದರೂ ರಾಜಕೀಯ ಪ್ರಭಾವ ಪ್ರಬಲವಾಗಿದೆ.
ರಾಜ್ಯಸಭಾ ಚುನಾವಣೆ
  • ಎಮ್‌ಎಎಮ್‌ ರಾಮಸ್ವಾಮಿಯವರಿಗೆ 1996ರಲ್ಲಿ ನೀಡಿದ ವಚನದನ್ವಯ ಅವರಿಗೆ ರಾಜ್ಯಸಭೆಗೆ ಟಿಕೆಟ್‌ ನೀಡಲಾಗಿದೆ.
  • ಜೆಡಿಎಸ್‌ನ ಹೆಚ್ಚುವರಿ ಮತಗಳು ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಗೆ
(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+