Get Updates
Get notified of breaking news, exclusive insights, and must-see stories!

90ರ ಕನಸಲ್ಲಿ ಕನ್ನಂಬಾಡಿ : ರಾಜ್ಯದ ಜಲಾಶಯಗಳಲ್ಲಿ ಗಂಗಾವತರಣ

90ರ ಕನಸಲ್ಲಿ ಕನ್ನಂಬಾಡಿ : ರಾಜ್ಯದ ಜಲಾಶಯಗಳಲ್ಲಿ ಗಂಗಾವತರಣ
ಜೀವ ತುಂಬಿಕೊಂಡ ಜಲಪಾತಗಳು, ನದಿಗಳಲ್ಲಿ ಸೊಕ್ಕು

ಮೈಸೂರು : ತಮಿಳುನಾಡಿಗೆ ಕಾವೇರಿಯಿಂದ ತೊಟ್ಟು ನೀರನ್ನೂ ಬಿಡಲು ಸಾಧ್ಯವಿಲ್ಲ ಎಂದು ಧರ್ಮಸಿಂಗ್‌ ಪಡೆ ಗುಡುಗುತ್ತಿರುವಂತೆಯೇ, ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಕನ್ನಂಬಾಡಿಯ ಒಳ ಹರಿವು ಕೂಡ ಹೆಚ್ಚುತ್ತಿದೆ.

ಜೂನ್‌ 14ರ ಸೋಮವಾರ ಕೃಷ್ಣರಾಜ ಸಾಗರ ಜಲಾಶಯದ ಒಳ ಹರಿವು 11,044 ಕ್ಯುಸೆಕ್ಸ್‌ಗಳಷ್ಟಿತ್ತು . ಇದು 2004ರಲ್ಲಿ ದಾಖಲಾದ ಗರಿಷ್ಠ ಮಟ್ಟದ ಒಳಹರಿವು. ಮಳೆಯ ಪ್ರಮಾಣ ಇದೇರೀತಿ ಮುಂದುವರೆದಲ್ಲಿ ಜಲಾಶಯದ ನೀರಿನ ಮಟ್ಟ ಶೀಘ್ರದಲ್ಲೇ 90 ಅಡಿ ಮುಟ್ಟುವ ನಿರೀಕ್ಷೆಯಿದೆ.

ಪ್ರಸ್ತುತ ಕೆಆರ್‌ಎಸ್‌ನಲ್ಲಿ 86 ಅಡಿ ನೀರಿನ ಸಂಗ್ರಹವಿದ್ದು , ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 68 ಅಡಿ ನೀರಿನ ಸಂಗ್ರಹವಿತ್ತು . ಜಲಾಶಯದ ಗರಿಷ್ಠ ಜಲ ಸಂಗ್ರಹ ಮಟ್ಟ 124.8 ಅಡಿ. ಈ ಬಾರಿ ಉತ್ತಮ ಮುಂಗಾರಿನ ನಿರೀಕ್ಷೆಯಿದ್ದು , ಜಲಾಶಯ ಭರ್ತಿಯಾಗಬಹುದೆಂದು ಸ್ಥಳೀಯ ಆಡಳಿತ ನಿರೀಕ್ಷಿಸಿದೆ.

ಹೆಗ್ಗಡದೇವನ ಕೋಟೆ ಆಸುಪಾಸಿನಲ್ಲೂ ಒಳ್ಳೆಯ ಮಳೆಯಾಗುತ್ತಿದ್ದು , ಕಬಿನಿ ಜಲಾಶಯದ ಒಳ ಹರಿವು ಕೂಡ ಸುಧಾರಿಸಿದೆ.

ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮುಂತಾದೆಡೆಗಳಲ್ಲಿ ಕೂಡ ಭಾರೀ ಮಳೆ ಸುರಿಯುತ್ತಿದ್ದು , ಜಲಮೂಲಗಳಲ್ಲಿ ಉತ್ಸಾಹ ಕಾಣಿಸಿಕೊಂಡಿದೆ. ಜಲಪಾತಗಳು ಭೋರ್ಗರೆಯುತ್ತಿದ್ದು , ನದಿಗಳಲ್ಲಿ ಉಕ್ಕು ಕಾಣಿಸಿಕೊಂಡಿದೆ. ನೂರಾರು ಮರಗಳು ಉರುಳಿಬಿದ್ದು ಕೆಲವೆಡೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಿದ್ಯುತ್‌ ಪೂರೈಕೆಗೂ ಧಕ್ಕೆ ಉಂಟಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+