ಪಡಿತರ ಗೋಧಿ ಪಾಪಿ ಪಾಲು ! ಹಗರಣದಿ ಪ್ರಭಾವಿಗಳ ಷಾಮೀಲು?
ಪಡಿತರ
ಗೋಧಿ
ಪಾಪಿ
ಪಾಲು
!
ಹಗರಣದಿ
ಪ್ರಭಾವಿಗಳ
ಷಾಮೀಲು?
ಮೂವರ
ಬಂಧನ,
903
ಕ್ವಿಂಟಾಲ್
ಗೋಧಿ
ವಶ
903 ಕ್ವಿಂಟಾಲ್ ಪಡಿತರ ಗೋಧಿಯನ್ನು ಬೆಂಗಳೂರಿನ ಗಿರಣಿಯಾಂದರಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಅಧಿಕಾರಿಗಳು ವಶಪಡಿಸಿಕೊಂಡಿದ್ದು , ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಭಾನುವಾರ ಎಚ್ಚರಿಸಿದ್ದಾರೆ. ಪ್ರಕರಣದ ಕುರಿತು ಸಿಸಿಬಿ ವರದಿಯನ್ನು ನಿರೀಕ್ಷಿಸುತ್ತಿದ್ದು , ವರದಿ ಬಂದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹೊಸೂರು ರಸ್ತೆಯ ಕೂಡ್ಲು ಗೇಟ್ ಸಮೀಪದ ಚಾಮುಂಡೇಶ್ವರಿ ರೋಲರ್ ಫ್ಲೋರ್ಮಿಲ್ನಲ್ಲಿ ಅಕ್ರಮ ಗೋಧಿ ದಾಸ್ತಾನು ಪತ್ತೆಯಾಗಿದ್ದು , ಈ ಗೋಧಿಯನ್ನು ರವೆ ಮಾಡಲಿಕ್ಕಾಗಿ ಗಿರಣಿಗೆ ತರಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ಏಳು ಲಾರಿಗಳನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಲಾರಿಗಳ ಮಾಲಿಕರು ಯಾರೆಂಬುದು ಪತ್ತೆಯಾಗಿಲ್ಲ . ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಣಿ ಒಡೆಯ ಮಹೇಂದ್ರ ಗುಪ್ತಾ , ಪ್ರಭಾಕರ್ ಹಾಗೂ ಸಲೀಂ ಪಾಷ ಎನ್ನುವವರನ್ನು ಬಂಧಿಸಲಾಗಿದೆ.
ಅಂದಹಾಗೆ, ಅಕ್ರಮ ಗೋಧಿ ದಾಸ್ತಾನಿನ ಮೇಲಿನ ದಾಳಿ ಮೇ ತಿಂಗಳ 21ರಂದೇ ನಡೆದಿದೆ. ಆದರೆ ದಾಳಿಯ ಬಗೆಗಿನ ವಿವರಗಳು ಬೆಳಕಿಗೆ ಬಂದಿರುವುದು ಜೂನ್ 13ರ ಭಾನುವಾರ. ಈ ಪ್ರಕರಣದಲ್ಲಿ ಪ್ರಭಾವಿ ಸಚಿವರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಯಡಿಯೂರಪ್ಪ ಆಪಾದಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು