Get Updates
Get notified of breaking news, exclusive insights, and must-see stories!

ರಾಜ್ಯಸಭಾ ಚುನಾವಣೆ: ಗೆಲುವಿಗಾಗಿ ರಾಜ್ಯ ಬಿಜೆಪಿ-ಕಾಂಗ್ರೆಸ್‌ ಕಸರತ್ತು

ರಾಜ್ಯಸಭಾ ಚುನಾವಣೆ: ಗೆಲುವಿಗಾಗಿ ರಾಜ್ಯ ಬಿಜೆಪಿ-ಕಾಂಗ್ರೆಸ್‌ ಕಸರತ್ತು
ಅಭ್ಯರ್ಥಿಗಳ ಗೆಲುವಿನಲ್ಲಿ ಪಕ್ಷೇತರ ಶಾಸಕರ ಪಾತ್ರ ನಿರ್ಣಾಯಕ

ಬೆಂಗಳೂರು: ಜೂನ್‌ 28ರಂದು ವಿಧಾನ ಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆಯುವುದು ಖಚಿತವಾಗಿದೆ. ರಾಜ್ಯದ ನಾಲ್ಕು ಸ್ಥಾನಗಳಿಗೆ ಐದು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವ ಕಾರಣ ಚುನಾವಣೆ ಅನಿವಾರ್ಯವೆನಿಸಿದೆ.

ಬಿಜೆಪಿಯು ಪಕ್ಷದ ಅಧ್ಯಕ್ಷ ವೆಂಕಯ್ಯನಾಯ್ಡು ಮತ್ತು ಮಾಜಿ ಮುಖ್ಯಮಂತ್ರಿರಾಮಕೃಷ್ಣ ಹೆಗಡೆ ಪತ್ನಿ ಶಕುಂತಳಾ ಹೆಗಡೆಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ನಿಂದ ಕೇಂದ್ರ ಸಚಿವ ಆಸ್ಕರ್‌ ಫೆರ್ನಾಂಡೀಸ್‌ ಮತ್ತು ಬಿ.ಕೆ.ಹರಿಪ್ರಸಾದ್‌ ಕಣದಲ್ಲಿದ್ದಾರೆ. ಜಾತ್ಯತೀತ ಜನತಾದಳದ ಏಕೈಕ ಅಭ್ಯರ್ಥಿ ಸ್ಪರ್ಧಿಸುವ ಕಾರಣ ಅವರ ಆಯ್ಕೆ ಸುಗಮವಾಗಿದೆ.

ಆಸ್ಕರ್‌ ಮತ್ತು ವೆಂಕಯ್ಯ ನಾಯ್ಡು ಅವರವರ ಪಕ್ಷಗಳ ಪ್ರಥಮ ಆದ್ಯತೆ. ಆದಕಾರಣ ಅವರ ಗೆಲುವು ಸ್ಪಷ್ಟ. ಆದರೆ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ಗೆ ಗೆಲ್ಲಲು ಹೆಚ್ಚುವರಿಯಾಗಿ 12 ಶಾಸಕರ ಬೆಂಬಲ ಬೇಕು. ಬಿಜೆಪಿಯ ಶಕುಂತಳಾ ಹೆಗಡೆಗೆ ಗೆಲ್ಲಲು ಹೆಚ್ಚುವರಿ 6 ಮತಗಳು ಬೇಕಾಗಿದೆ. ಇದರಿಂದ 13ಜನ ಪಕ್ಷೇತರ ಶಾಸಕರ ಪಾತ್ರ ನಿರ್ಣಾಯಕ ವಾಗಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಾರಾದೇವಿ ಸೋಲನ್ನುಂಡಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+