Get Updates
Get notified of breaking news, exclusive insights, and must-see stories!

ಸಾಹಿತ್ಯ ಪರಿಷತ್ತಿನಲ್ಲಿ ಕುವೆಂಪು , ಪುತಿನರವರ ಕಾವ್ಯ-ಮಾಧುರ್ಯ

ಸಾಹಿತ್ಯ ಪರಿಷತ್ತಿನಲ್ಲಿ ಕುವೆಂಪು , ಪುತಿನರವರ ಕಾವ್ಯ-ಮಾಧುರ್ಯ
ಕುವೆಂಪು, ಪುತಿನ ಹಾಡಗಬ್ಬ ; ಇದು ಹೊಂಬಾಳೆಯ ‘ಕಾವ್ಯರ್ಷಿ ವಂದನಾ’ಕುವೆಂಪು ಮತ್ತು ಪುತಿನರವರ ಶತಮಾನ ಸ್ಮರಣೆಯ ಅಂಗವಾಗಿ, ಎಚ್‌. ಫಲ್ಗುಣ ಅವರ ನೇತ್ರತ್ವದಲ್ಲಿ ಹೊಂಬಾಳೆ ಪ್ರತಿಭಾರಂಗ(ರಿ)ವು ‘ಕಾವ್ಯರ್ಷಿ ವಂದನಾ’ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಎಲ್ಲರನ್ನೂ ಹೃತ್ಪೂರ್ವಕವಾಗಿ ಆಮಂತ್ರಿಸಲಾಗುತ್ತಿದೆ. ಸರ್ವರಿಗೂ ಸುಸ್ವಾಗತ.

ಕನ್ನಡ ಕಾವ್ಯಮಂಜೂಷವನ್ನು ಶ್ರೀಮಂತಗೊಳಿಸಿದ, ಸಂಪನ್ನಗೊಳಿಸಿದ, ಕವಿಋಷಿ ಪರಂಪರೆಯನ್ನು ಹೊಂದಿದ ಕರುನಾಡು, ದೇಶಕ್ಕಷ್ಟೇ ಏಕೆ ವಿಶ್ವಸ್ತರಕ್ಕೂ ಕನ್ನಡದ ಸಾಹಿತ್ಯಸತ್ವವನ್ನು ಎತ್ತರಿಸಿದ ಹಲವು ಧೀಮಂತ ಚೇತನಗಳನ್ನು ಕಂಡ, ಕಾಣುತ್ತಿರುವ, ಕಾಣಲಿರುವ ಕಂಪಿನ- ತಂಪಿನ ನಾಡು ಕರ್ನಾಟಕ. ಇಂತಹ ಧೀಮಂತ ಚೇತನಗಳ ಸಾಲಿಗೆ ಸೇರಿದವರು ರಾಷ್ಟ್ರಕವಿ ಕುವೆಂಪು ಹಾಗೂ ಪುತಿನ. ಕಾಳಿಂಗರಾಯರಿಂದ ಮೊದಲ್ಗೊಂಡು ಇವತ್ತಿನ ಒಬ್ಬ ಉತ್ಸಾಹಿ ತರುಣಾತಿತರುಣ ಸಂಯಾಜಕರವರೆಗೂ ಕುವೆಂಪು ಮತ್ತು ಪುತಿನ ಅವರ ಸಾಹಿತ್ಯ ನಿತ್ಯ-ನೂತನ-ನವೋನವ. ಇವರೀರ್ವರ ಗರಿಷ್ಠ ಪದ್ಯಗಳು ಜ್ಞಾತಾಜ್ಞಾತ ಸಂಯೋಜಕರ, ಹಾಡುಗಾರರ ಬತ್ತಳಿಕೆ ಸೇರಿಯಾಗಿದೆ. ರಸಋಷಿ ಕುವೆಂಪು ಮತ್ತು ಕೊಳಲ ಕವಿ ಪುತಿನ ಅವರ ಶತಾಬ್ಧಿ ಆಚರಣೆಯಲ್ಲಿ ಇಡೀ ಕನ್ನಡನಾಡು ತೊಡಗಿಕೊಳ್ಳುತ್ತಲಿದೆ.

ಈ ನಿಟ್ಟಿನಲ್ಲಿ ಸುಗಮಸಂಗೀತ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸುತ್ತಿರುವ ಹೊಂಬಾಳೆ ಪ್ರತಿಭಾ ರಂಗ ಸಂಸ್ತೆ ದಿನಾಂಕ 12-06-2004 ರ ಶನಿವಾರ ಸಂಜೆ 6 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯರ್ಷಿ ವಂದನಾ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕುವೆಂಪು ಮತ್ತು ಪುತಿನ ಶತಮಾನ ಸ್ಮರಣೆಯ ಗಾಯನ ಕಾರ್ಯಕ್ರಮದಲ್ಲಿ ಅಂದು ಈ ಕೆಳಗಿನ ಹಿರಿಯ-ಕಿರಿಯ ಸುಗಮಸಂಗೀತ ಹಾಡುಗಾರರು ಕುವೆಂಪು ಮತ್ತು ಪುತಿನ ಅವರ ಕವನಗಳನು ಹಾಡುವುದರ ಮೂಲಕ ಗೀತನಮನ ಸಲ್ಲಿಸಲಿದ್ದಾರೆ.

ಕುವೆಂಪು ಗೀತ ನಮನ

Kuvempuಶಿವಮೊಗ್ಗ ಸುಬ್ಬಣ್ಣ, ಬಿ.ಕೆ. ಸುಮಿತ್ರಾ, ಯಶವಂತ ಹಳಿಬಂಡಿ, ವೈ.ಕೆ. ಮುದ್ದುಕೃಷ್ಣ, ನರಸಿಂಹ ನಾಯಕ್‌, ಅಪ್ಪಗೆರೆ ತಿಮ್ಮರಾಜು, ಕಿಕ್ಕೇರಿ ಕೃಷ್ಣಮೂರ್ತಿ, ಸಿ.ಎಸ್‌. ನಂದಿತಾ, ಶಮಿತಾ ಮಲ್ನಾಡ್‌, ಎಚ್‌.ಆರ್‌.ಕೆ. ಪ್ರಸಾದ್‌, ಭಾಗ್ಯ ವಿ. ರಾವ್‌, ಟಿ. ಗೊಪಾಲಕೃಷ್ಣ.

ಪುತಿನ ಗೀತ ನಮನ

Pu.Thi.narasimhaacharಶ್ರೀನಿವಾಸ ಉಡುಪ, ಚಂದ್ರಿಕಾ ಗುರುರಾಜ್‌, ಕೆ.ಎಸ್‌. ಸುರೇಖಾ, ಶಂಕರ್‌ ಶಾನುಭಾಗ್‌, ಮಂಜುಳಾ ಪರಮೇಶ್‌, ಎಸ್‌. ಸುನೀತಾ, ಅರ್ಚನಾ ಉಡುಪ, ವೃಂದಾ ಎಸ್‌. ರಾವ್‌, ಎಂ. ಲಕ್ಷ್ಮೀಕಾಂಟ, ಚಂದ್ರಿಕಾ ಬದರೀನಾಥ್‌, ಎಂ,ಎಸ್‌, ಶ್ರೀಕೃಷ್ಣ, ಶ್ರೀರಕ್ಷಾ ಅರವಿಂದ್‌.

ಎನ್‌.ಎಸ್‌. ಪ್ರಸಾದ್‌, ಬಿ.ವಿ ಶ್ರೀನಿವಾಸ್‌, ಎಂ.ಬಿ. ಶಶಿಧರ, ಟಿ. ಲಕ್ಷ್ಮೀಪತಿ, ಪ್ರದ್ಯುಂನ, ಎಂ.ವಿ. ಕೃಷ್ಣ, ಮುಂತಾದವರು ಹಾಡುಗಾರರಿಗೆ ವಾದ್ಯ ಸಹಕಾರ ನೀಡಲಿದ್ದಾರೆ. ರಂಯ ಕಲ್ಚರಲ್‌ ಅಕಾಡೆಮಿ, ಆದರ್ಶ ಸುಗಮ ಸಂಗೀತ ಅಕಾಡೆಮಿ ಮತ್ತು ಲಹರಿ ರೆಕಾರ್ಡಿಂಗ್‌ ಕಂ. ಪ್ರೈ.ಲಿ., ಸಂಸ್ಥೆಗಳು ಕಾವ್ಯರ್ಷಿ ವಂದನಾ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದ್ದಾರೆ.

ದಿನಾಂಕ: 12-06-2004 ರ ಶನಿವಾರ
ಸಮಯ: ಸಂಜೆ 6 ಗಂಟೆಗೆ
ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು,
ಚಾಮರಾಜಪೇಟೆ, ಬೆಂಗಳೂರು- 560 018.

ಹೆಚ್ಚಿನ ಮಾಹಿತಿಗಾಗಿ :
21, ದಿವ್ಯ, 1ನೇ ಮಹಡಿ,
ಮದ್ದೂರಮ್ಮ ಗುಡಿ ರಸ್ತೆ,
ಪೈಪ್‌ಲೈನ್‌, ಶ್ರೀನಗರ,
ಬೆಂಗಳೂರು-560 050.
ದೂರವಾಣಿ: 26529303
ಸಂಚಾರಿ: 94480 87887,
ಈ ಪತ್ರ: [email protected]

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+