ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿದ ಸಮಸ್ಯೆ: ಜೂನ್‌ ಅಂತ್ಯ ತನಕ ನೀರು ಬಿಡದಿರಲು ತೀರ್ಮಾನ

By Staff
|
Google Oneindia Kannada News

ಕಾವೇರಿದ ಸಮಸ್ಯೆ: ಜೂನ್‌ ಅಂತ್ಯ ತನಕ ನೀರು ಬಿಡದಿರಲು ತೀರ್ಮಾನ
ತ.ನಾ. ತಂಡದ ಜೊತೆ ಮಾತುಕತೆ ನಡೆಸಿದ ಬಳಿಕ ನಿರ್ಧಾರ

ಬೆಂಗಳೂರು: ಜೂನ್‌ 10ರಂದು ರಾಜ್ಯಕ್ಕೆ ತಮಿಳುನಾಡು ನಿಯೋಗವೊಂದು ಆಗಮಿಸಲಿದೆ. ಅವರ ಬೇಡಿಕೆ ಏನೆಂದು ಪರಿಗಣಿಸಿದ ಬಳಿಕ ನಾವು ನಿರ್ಧಾರ ಕೈಗೊಳ್ಳುತ್ತೇವೆ. ಜೂನ್‌ಅಂತ್ಯಕ್ಕೆ ನೀರು ಬಿಡಬೇಕು ಎಂದು ಮಧ್ಯಂತರ ಆದೇಶದಲ್ಲಿ ಹೇಳಲಾಗಿದೆ. ಆದ್ದರಿಂದ ಈ ಬಗ್ಗೆ ನಾವು ಯಾವುದೇ ತಿರ್ಮಾನ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ಹೇಳಿದರು.

ಅವರು ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಜೂನ್‌7ರ ಸೋಮವಾರ ನಡೆದ ಉನ್ನತ ಅಧಿಕಾರಿಗಳ ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿದರು.

ನೀರು ಹಂಚಿಕೆ ಕುರಿತಂತೆ ತಮಿಳುನಾಡು ನಮ್ಮನ್ನು ಸಂಪರ್ಕಿಸಿಲ್ಲ. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಅವಶ್ಯಕತೆ ನಮಗಿಲ್ಲ. ಈಗ ಬರುತ್ತಿರುವ ನಿಯೋಗ ಅನಧಿಕೃತವಾದುದು. ಅವರ ಬೇಡಿಕೆಗಳು ಏನೆಂದು ತಿಳಿದು ಕ್ರಮ ಕೈಗೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಉನ್ನತ ಅಧಿಕಾರಿಗಳ ಸಭೆಯಯಲ್ಲಿ ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡದಿರುವ ತಾತ್ಕಾಲಿಕ ತೀರ್ಮಾನಕ್ಕೆ ಬರಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X