ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ನಿರ್ಧಾರಕ್ಕೆ ತಾನು ಬದ್ಧ : ರಾಜ್ಯಪಾಲ ಟಿ.ಎನ್‌. ಚತುರ್ವೇದಿ

By Staff
|
Google Oneindia Kannada News

ರಾಷ್ಟ್ರಪತಿ ನಿರ್ಧಾರಕ್ಕೆ ತಾನು ಬದ್ಧ : ರಾಜ್ಯಪಾಲ ಟಿ.ಎನ್‌. ಚತುರ್ವೇದಿ
ಎಡಪಕ್ಷಗಳ ಹೇಳಿಕೆಗೆ ಚತುರ್ವೇದಿ ಪ್ರತಿಕ್ರಯೆ

ಬೆಂಗಳೂರು : ರಾಜ್ಯದ ರಾಜ್ಯಪಾಲ ಹುದ್ದೆಯಿಂದ ಹಿಂದಕ್ಕೆ ಕರೆಯಿಸಿಕೊಳ್ಳುವುದು ಅಥಾವ ಮುಂದುವರಿಸುವುದು ರಾಷ್ಟ್ರಪತಿ ನಿರ್ಣಯಕ್ಕೆ ಬಿಟ್ಟ ವಿಚಾರವಾಗಿದೆ ಎಂದು ರಾಜ್ಯಪಾಲ ಟಿ.ಎನ್‌.ಚರ್ತುವೇದಿ ಹೇಳಿದ್ದಾರೆ.

ಸಂಘ ಪರಿವಾರಕ್ಕೆ ಬದ್ಧರಾದ ವ್ಯಕ್ತಿಗಳನ್ನು ಎನ್‌ಡಿಎ ಸರಕಾರ ರಾಜ್ಯಪಾಲರುಗಳಾಗಿ ನೇಮಿಸಿದೆ. ಅವರುಗಳು ರಾಜಿನಾಮೆ ಸಲ್ಲಿಸಬೇಕು ಎಂದು ಎಡಪಕ್ಷಗಳು ಈ ಹಿಂದೆ ಹೇಳಿದ್ದವು. ನೂತನ ಕೇಂದ್ರ ಸರಕಾರಕ್ಕೆ ಎಡಪಕ್ಷಗಳು ಬಾಹ್ಯ ಬೆಂಬಲ ನೀಡುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಚತುರ್ವೇದಿ ಇದು ರಾಷ್ಟ್ರಪತಿಯವರ ವಿವೇಚನೆಗೆ ಬಿಟ್ಟ ವಿಚಾರ. ಅವರು ನಮ್ಮನ್ನು ನೇಮಕ ಮಾಡಿದವರು. ನಾನು ದೆಹಲಿಗೆ ಹೋದಾಗಲೆಲ್ಲ ರಾಷ್ಟ್ರಪತಿಯನ್ನು ಭೇಟಿ ಮಾಡುತ್ತೇನೆ. ಅವರು ಈ ಕುರಿತಾದ ವಿಷಯವೇನನ್ನೂ ಪ್ರಸ್ತಾಪಿಸಲಿಲ್ಲ. ಇದಕ್ಕಿಂತ ಹೆಚ್ಚಿನದಾಗಿ ನನಗೇನೂ ತಿಳಿದಿಲ್ಲ ಎಂದು ಹೇಳಿದರು.

(ಇನ್ಫೋವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X