ಉದ್ಯೋಗ ಸೃಷ್ಠಿಯ ವ್ಯಾಸಂಗ ವಿಷಯದ ಬಗ್ಗೆ ಚಿಂತನೆ: ಶಿವಕುಮಾರ್
ಉದ್ಯೋಗ
ಸೃಷ್ಠಿಯ
ವ್ಯಾಸಂಗ
ವಿಷಯದ
ಬಗ್ಗೆ
ಚಿಂತನೆ:
ಶಿವಕುಮಾರ್
ಪದವಿ
ಪಠ್ಯಗಳಲ್ಲಿ
ಬಿಪಿಒ
ಮತ್ತು
ಮಾಹಿತಿ
ತಂತ್ರಜ್ಞಾನಕ್ಕೆ
ಪ್ರಾಧಾನ್ಯತೆ
ಈ ತರಬೇತುದಾರರ ತರಬೇತಿ ಕಾರ್ಯ ಯೋಜನೆಯಡಿಯಲ್ಲಿ ಅಧ್ಯಾಪಕರುಗಳನ್ನು, ವಿದ್ಯಾರ್ಥಿಗಳಿಗೆ ಹೇಗೆ ಐಟಿ ಮತ್ತು ಬಿಪಿಒಗಳ ಬಗೆಗೆ ಮಾಹಿತಿ ನೀಡಬೇಕೆಂಬುದನ್ನು ಕಲಿಸಿಕೊಡುವ ಆಲೋಚನೆಯಿದೆ ಎಂದು ಕರ್ನಾಟಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಾರ್ಯದರ್ಶಿ ಕೆ.ಎಂ. ಶಿವಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಐಟಿ ಮತ್ತು ಬಿಪಿಒಗಳಲ್ಲಿ ಈಗ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ ಅವುಗಳಿಗೆ ಒಳ್ಳೆಯ ಭವಿಷ್ಯವೂ ಇದೆ. ಎಲ್ಲರೂ ಸರಕಾರಿ ಕೆಲಸಗಳನ್ನೇ ನಂಬಿ ಕೂರುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಅಧ್ಯಾಪಕರುಗಳಿಗೇ ಸರಿಯಾದ ತರಬೇತಿ ಕೊಟ್ಟು ವಿದ್ಯಾರ್ಥಿಗಳನ್ನು ನಿರುದ್ಯೋಗ ಸಮಸ್ಯೆಯಿಂದ ಪಾರುಮಾಡುವಲ್ಲಿ ಯಶಸ್ವಿಯಾಗಬಹುದು. ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಈಗಾಗಲೇ ಈ ತರಬೇತುದಾರರ ತರಬೇತಿ ಯೋಜನೆಯ ಸಂಬಂಧಿ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಲಾಗಿದೆ ಎಂದು ಕೆ.ಎಂ. ಶಿವಕುಮಾರ್ ಅಭಿಪ್ರಾಯಪಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು