ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧ್ರುವಗಳ ಮಿಲನ : ಧರ್ಮಸಿಂಗ್‌-ಸಿದ್ಧರಾಮಯ್ಯಜೊತೆಜೊತೆಯಲಿ..

By Staff
|
Google Oneindia Kannada News

ಧ್ರುವಗಳ ಮಿಲನ : ಧರ್ಮಸಿಂಗ್‌-ಸಿದ್ಧರಾಮಯ್ಯಜೊತೆಜೊತೆಯಲಿ..
ಸೌಹಾರ್ದತಾ ಸಮಿತಿಯಿಂದ ಸದ್ಯದಲ್ಲೇ ಕನಿಷ್ಠ ಸಾಮಾನ್ಯ ಕಾರ್ಯಕ್ರಮ

ಬೆಂಗಳೂರು : ಕಾಂಗ್ರೆಸ್‌ ಮತ್ತು ಜಾತ್ಯತೀತ ಜನತಾದಳಗಳ ಸೌಹಾರ್ದತಾ ಸಮಿತಿ ನೂತನ ಸಮ್ಮಿಶ್ರ ಸರ್ಕಾರದ ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳನ್ನು (Common Minimum Programme) ರೂಪಿಸಲಿದೆ ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ತಮ್ಮ ನೂತನ ಸಹೋದ್ಯೋಗಿ ಹಾಗೂ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯನವರೊಂದಿಗೆ ಸುದ್ದಿಗಾರರಿಗೆ ಮುಖಾಮುಖಿಯಾದ ಧರ್ಮಸಿಂಗ್‌- ಕನಿಷ್ಠ ಸಾಮಾನ್ಯ ಅಂಶಗಳನ್ನು ಉಭಯ ಪಕ್ಷಗಳ ಸೌಹಾರ್ದತಾ ಸಮಿತಿ ಸದ್ಯದಲ್ಲೇ ರಚಿಸಲಿದೆ ಎಂದರು.

ಉಭಯ ಪಕ್ಷಗಳ ಉನ್ನತ ನಾಯಕರನ್ನು ಸಂಪರ್ಕಿಸಿದ ನಂತರ ಸಚಿವ ಸಂಪುಟ ರಚನೆ ಮಾಡಲಾಗುತ್ತದೆ. ಆದರೆ ಸಂಪುಟ ರಚನೆಯ ಕುರಿತು ಯಾವುದೇ ಕಾಲಮಿತಿ ಹಾಕಿಕೊಂಡಿಲ್ಲ . ಎಷ್ಟೋ ಸಾಧ್ಯವೋ ಅಷ್ಟು ಬೇಗ ಸಂಪುಟ ವಿಸ್ತರಿಸಲಾಗುವುದು ಎಂದು ಧರ್ಮಸಿಂಗ್‌ ಹೇಳಿದರು.

ಕಾಂಗ್ರೆಸ್‌ ಹಾಗೂ ಜಾತ್ಯತೀತ ದಳದ ನಡುವೆ ಅನೇಕ ವಿಷಯಗಳಲ್ಲಿ ಭಿನ್ನಮತವಿದೆ. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಕೈಗೂಡಿಸಿದ್ದೇವೆ ಎಂದು ನೂತನ ಮುಖ್ಯಮಂತ್ರಿ ಧರ್ಮಸಿಂಗ್‌ ಹೇಳಿದರು. ಸಾಮಾನ್ಯ ಜನತೆ, ಬಡವರು ಹಾಗೂ ರೈತರ ಹಿತಾಸಕ್ತಿಯನ್ನು ತಮ್ಮ ಸರ್ಕಾರ ರಕ್ಷಿಸುವುದೆಂದು ಅವರು ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X