ಧ್ರುವಗಳ ಮಿಲನ : ಧರ್ಮಸಿಂಗ್-ಸಿದ್ಧರಾಮಯ್ಯಜೊತೆಜೊತೆಯಲಿ..
ಧ್ರುವಗಳ
ಮಿಲನ
:
ಧರ್ಮಸಿಂಗ್-ಸಿದ್ಧರಾಮಯ್ಯಜೊತೆಜೊತೆಯಲಿ..
ಸೌಹಾರ್ದತಾ
ಸಮಿತಿಯಿಂದ
ಸದ್ಯದಲ್ಲೇ
ಕನಿಷ್ಠ
ಸಾಮಾನ್ಯ
ಕಾರ್ಯಕ್ರಮ
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ತಮ್ಮ ನೂತನ ಸಹೋದ್ಯೋಗಿ ಹಾಗೂ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯನವರೊಂದಿಗೆ ಸುದ್ದಿಗಾರರಿಗೆ ಮುಖಾಮುಖಿಯಾದ ಧರ್ಮಸಿಂಗ್- ಕನಿಷ್ಠ ಸಾಮಾನ್ಯ ಅಂಶಗಳನ್ನು ಉಭಯ ಪಕ್ಷಗಳ ಸೌಹಾರ್ದತಾ ಸಮಿತಿ ಸದ್ಯದಲ್ಲೇ ರಚಿಸಲಿದೆ ಎಂದರು.
ಉಭಯ ಪಕ್ಷಗಳ ಉನ್ನತ ನಾಯಕರನ್ನು ಸಂಪರ್ಕಿಸಿದ ನಂತರ ಸಚಿವ ಸಂಪುಟ ರಚನೆ ಮಾಡಲಾಗುತ್ತದೆ. ಆದರೆ ಸಂಪುಟ ರಚನೆಯ ಕುರಿತು ಯಾವುದೇ ಕಾಲಮಿತಿ ಹಾಕಿಕೊಂಡಿಲ್ಲ . ಎಷ್ಟೋ ಸಾಧ್ಯವೋ ಅಷ್ಟು ಬೇಗ ಸಂಪುಟ ವಿಸ್ತರಿಸಲಾಗುವುದು ಎಂದು ಧರ್ಮಸಿಂಗ್ ಹೇಳಿದರು.
ಕಾಂಗ್ರೆಸ್ ಹಾಗೂ ಜಾತ್ಯತೀತ ದಳದ ನಡುವೆ ಅನೇಕ ವಿಷಯಗಳಲ್ಲಿ ಭಿನ್ನಮತವಿದೆ. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಕೈಗೂಡಿಸಿದ್ದೇವೆ ಎಂದು ನೂತನ ಮುಖ್ಯಮಂತ್ರಿ ಧರ್ಮಸಿಂಗ್ ಹೇಳಿದರು. ಸಾಮಾನ್ಯ ಜನತೆ, ಬಡವರು ಹಾಗೂ ರೈತರ ಹಿತಾಸಕ್ತಿಯನ್ನು ತಮ್ಮ ಸರ್ಕಾರ ರಕ್ಷಿಸುವುದೆಂದು ಅವರು ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು