ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಾಪಾ ಪಾಪ : ರಾಜ್ಯದಲ್ಲಿ ತೆಲಗಿಯ ಮೂವರು ಸಹಚರರ ಬಂಧನ

By Staff
|
Google Oneindia Kannada News

ಛಾಪಾ ಪಾಪ : ರಾಜ್ಯದಲ್ಲಿ ತೆಲಗಿಯ ಮೂವರು ಸಹಚರರ ಬಂಧನ
ದಾಳಿಯಲ್ಲಿ 1.5 ಕೋಟಿ ರು. ನಕಲಿ ಛಾಪಾ ವಶ

ಬೆಂಗಳೂರು : ಬಹುಕೋಟಿ ಛಾಪಾ ಪಾಪ ಹಗರಣದ ಪ್ರಮುಖ ಆರೋಪಿ ಅಬ್ದುಲ್‌ ಕರೀಂಲಾಲ ತೆಲಗಿಯ ಮೂವರು ಸಹಚರರನ್ನು ಕೇಂದ್ರ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿದೆ.

ಜನತಾ ಆಫ್‌ಸೆಟ್‌ ಪ್ರಿಂಟರ್ಸ್‌ನ ಮಾಲೀಕ ರಾಘವೇಂದ್ರ ಪ್ರಸಾದ್‌ ಹಾಗೂ ಬಳ್ಳಾರಿಯ ಶ್ರೀನಿವಾಸ ಪ್ರಿಂಟಿಂಗ್‌ ಪ್ರೆಸ್‌ ಮಾಲೀಕರಾದ ಮುನ್ನಾರೆಡ್ಡಿ ಮತ್ತು ರಾಮಚಂದ್ರ ಬಂಧಿತರು. ತೆಲಗಿಯ ಮತ್ತೊಬ್ಬ ಸಹಚರ ಮೆಹಬೂಬ್‌ ಖಾನ್‌ನನ್ನು ಬಳ್ಳಾರಿಯಲ್ಲಿ ತನಿಖೆಗೊಳಪಡಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಬುಧವಾರ ರಾಜ್ಯದ ವಿವಿಧೆಡೆ ಸಿಬಿಐ ನಡೆಸಿದ ಮಿಂಚಿನ ದಾಳಿಯಲ್ಲಿ ಸುಮಾರು 1.5 ಕೋಟಿ ರುಪಾಯಿ ಮೌಲ್ಯದ ನಕಲಿ ಸ್ಟಾಂಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X