ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಕೋಟಿ ಛಾಪಾ ಪಾಪ : ಬೆಂಗಳೂರ ವಿವಿಧೆಡೆಯಲ್ಲಿ ಸಿಬಿಐ ದಾಳಿ

By Staff
|
Google Oneindia Kannada News

ಬಹುಕೋಟಿ ಛಾಪಾ ಪಾಪ : ಬೆಂಗಳೂರ ವಿವಿಧೆಡೆಯಲ್ಲಿ ಸಿಬಿಐ ದಾಳಿ
ತೆಲಗಿ ನೀಡಿದ ಸುಳಿವಿನ ಮೇರೆಗೆ ದಾಳಿ ?

ಬೆಂಗಳೂರು : ಬಹುಕೋಟಿ ಛಾಪಾ ಪಾಪ ಹಗರಣವನ್ನು ಬಯಲಿಗೆಳೆಯಲು ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಬುಧವಾರ ವ್ಯಾಪಕ ದಾಳಿ ನಡೆಸಿತು.

ಬೆಂಗಳೂರಿನ ವಿವಿಧೆಡೆಗಳಲ್ಲಿ ದಾಳಿ ನಡೆಸಲಾಯಿತು ಎಂದು ಸಿಬಿಐ ಮೂಲಗಳು ತಿಳಿಸಿವೆ. ದೇಶಾದ್ಯಂತ ಬೀರು ಬಿಟ್ಟಿರುವ ನಕಲಿ ಛಾಪಾ ಜಾಲದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು , ಬೆಂಗಳೂರಿನ ದಾಳಿಗಳು ತನಿಖೆಯ ಅಂಗವಾಗಿ ನಡೆದಿವೆ ಎನ್ನಲಾಗಿದೆ.

ಛಾಪಾ ಪಾಪದ ಪ್ರಮುಖ ಆರೋಪಿ ಅಬ್ದುಲ್‌ ಕರೀಂ ಲಾಲ ತೆಲಗಿಯನ್ನು ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸುವ ಆದೇಶವನ್ನು ಪುಣೆಯ ಹೈಕೋರ್ಟ್‌ ಕಳೆದ ವಾರ ನೀಡಿತ್ತು . ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದ ತೆಲಗಿ ಪ್ರಸ್ತುತ ಸಿಬಿಐ ವಶದಲ್ಲಿದ್ದಾನೆ. ದೆಹಲಿಯಲ್ಲಿ ತೆಲಗಿಯ ವಿಚಾರಣೆ ನಡೆಯುತ್ತಿದ್ದು , ತೆಲಗಿ ನೀಡಿದ ಸುಳಿವಿನ ಮೇರೆಗೆ ಸಿಬಿಐ ದಾಳಿ ನಡೆಸಿರಬಹುದೆಂದು ಶಂಕಿಸಲಾಗಿದೆ.

ದಾಳಿಯ ಬಗೆಗಿನ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ .

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X