Get Updates
Get notified of breaking news, exclusive insights, and must-see stories!

ಮುಂಗಾರೊಲಿದ ಗುಲ್ಬರ್ಗಾ ಜಿಲ್ಲೆಯಲ್ಲಿ ರೈತರಿಗೀಗ ಬಿಡುವೆಂಬುದಿಲ್ಲ

ಮುಂಗಾರೊಲಿದ ಗುಲ್ಬರ್ಗಾ ಜಿಲ್ಲೆಯಲ್ಲಿ ರೈತರಿಗೀಗ ಬಿಡುವೆಂಬುದಿಲ್ಲ
ಉಳುಮೆ ಆರಂಭ, ಬೀಜಗಳ ತಲಾಷಿನಲ್ಲಿ ರೈತರು

ಬೆಂಗಳೂರು : ಸೂರ್ಯರಥ ಸದಾ ಕೆಟ್ಟುನಿಲ್ಲುವ ಅಪಕೀರ್ತಿಯ ಗುಲ್ಬರ್ಗಾ ಜಿಲ್ಲೆಯಲ್ಲಿ ಈ ಬಾರಿ ಮಳೆರಾಯನ ಮಾಯೆ ಜೋರಾಗಿದ್ದಂತಿದೆ. ರಾಜ್ಯದ ವಿವಿಧೆಡೆ ಚುರುಕಾಗಿರುವ ಮುಂಗಾರು ಗುಲ್ಬರ್ಗಾ ಜಿಲ್ಲೆಯಲ್ಲೂ ಉತ್ತಮವಾಗಿದೆ.

ಮಳೆ ಬೀಳುತ್ತಿರುವಂತೆ ರೈತರ ಮುಖಗಳಲ್ಲಿ ಕನಸುಗಳು ಚಿಗುರುತ್ತಿದ್ದು ಕೃಷಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ ಉಳುಮೆ ಬಿತ್ತನೆಯಲ್ಲಿ ತೊಡಗುತ್ತಿದ್ದ ರೈತರು, ಈ ಬಾರಿ ಮೇ ತಿಂಗಳ ಮಧ್ಯಭಾಗದಲ್ಲೇ ಹೊಲಕ್ಕಿಳಿದಿದ್ದಾರೆ. ಮುಂಗಾರು ಉತ್ತಮವಾಗಿ ಬೀಳುತ್ತಿರುವುದರಿಂದ ಹಾಗೂ ಮುಂದಿನ ದಿನಗಳಲ್ಲೂ ಉತ್ತಮ ಮಳೆ ಬೀಳುವ ನಿರೀಕ್ಷೆಯಿಂದ ರೈತರು ಕೃಷಿ ಕಾರ್ಯಗಳಲ್ಲಿ ಆಸಕ್ತಿಯಿಂದ ತೊಡಗಿದ್ದು , ಬೀಜ ಹೊಂಚಿಕೊಳ್ಳುವ ಹವಣಿಕೆಯಲ್ಲಿದ್ದಾರೆ.

ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ ಹಾಗೂ ತೊಗರಿಯನ್ನು ಬಿತ್ತಲು ಬಹುತೇಕ ರೈತರು ಮುಂದಾಗಿದ್ದಾರೆ. ಕಳೆದ ಮೂರು ವರ್ಷಗಳ ಬರದಿಂದಾಗಿ ಗುಲ್ಬರ್ಗಾದ ಜನತೆ ಕಂಗೆಟ್ಟಿದ್ದರು. ಬಹುತೇಕ ರೈತರು ಸನಿಹದ ಪಟ್ಟಣ ಪ್ರದೇಶಗಳಿಗೆ ಜೀವನೋಪಾಯಕ್ಕಾಗಿ ವಲಸೆ ಹೋಗಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+