ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾಯಮೂರ್ತಿ ಎಸ್‌.ರಾಜೇಂದ್ರ ಬಾಬುವಿಗೆ ಬೆಂಗಳೂರಿನಲ್ಲಿ ಸನ್ಮಾನ

By Staff
|
Google Oneindia Kannada News

ನ್ಯಾಯಮೂರ್ತಿ ಎಸ್‌.ರಾಜೇಂದ್ರ ಬಾಬುವಿಗೆ ಬೆಂಗಳೂರಿನಲ್ಲಿ ಸನ್ಮಾನ
ಕನ್ನಡದಲ್ಲಿ ಭಾಷಣ ಮಾಡಿದ ನ್ಯಾಯಮೂರ್ತಿ

ಬೆಂಗಳೂರು : ವಕೀಲ ವೃತ್ತಿಯ ಅರಂಭದಲ್ಲಿ ನಾನು ಸೈಕಲಿನಲ್ಲಿ ನ್ಯಾಯಾಲಯಕ್ಕೆ ಹೋಗುತ್ತಿದೆ. ಆಗ ಅಲ್ಲಿ ಐದಾರು ಕಾರುಗಳು ಇರುತ್ತಿದ್ದವು. ಈಗ ಕಾಲ ಬದಲಾಗಿದೆ ಕಾರು ನಿಲ್ಲಿಸಲು ಅಲ್ಲಿ ಜಾಗವಿಲ್ಲದಂತಾಗಿದೆ. ನ್ಯಾಯವಾದಿಗಳಿಗೆ ಹೆಚ್ಚಿರುವ ಅವಕಾಶವನ್ನು ಇದು ಸೂಚಿಸುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌.ರಾಜೇಂದ್ರ ಬಾಬು ಹೇಳಿದರು.

ಅವರು ಮೇ.18ರ ಮಂಗಳವಾರ ಬೆಂಗಳೂರು ವಕೀಲರ ಸಂಘ ಏರ್ಪಡಿಸಿದ ಸನ್ಮಾನ ಸಮಾರಂಭ ಸ್ವೀಕರಿಸಿ ಮಾತನಾಡುತ್ತಿದ್ದರು.

ನ್ಯಾಯಮೂರ್ತಿ ಇ.ಎಸ್‌. ವೆಂಕಟರಾಮಯ್ಯನವರು ನನ್ನ ಗುರುಗಳು. ಬೆಂಗಳೂರಿಗೆ ಬಂದಾಗ ತವರು ಮನೆಗೆ ಬಂದಂತಹ ಅನುಭವವಾಗುತ್ತದೆ ಎಂದು ಹೇಳಿದ ಅವರು ನ್ಯಾಯಮೂರ್ತಿಗಳು ಮತ್ತು ಜನರ ಮಧ್ಯೆ ಯಾವುದೇ ರೀತಿಯ ಅಡ್ಡಗೋಡೆಗಳು ಇರಬಾರದು. ನಿರ್ವಾತದಲ್ಲಿ ಕಾರ್ಯನಿರ್ವಹಿಸುವುದು ಅಸಾಧ್ಯ ಎಂದು ಹೇಳಿದರು. ರಾಜೇಂದ್ರ ಬಾಬು ತಮ್ಮ ಸಂಪೂರ್ಣ ಭಾಷಣವನ್ನು ಕನ್ನಡದಲ್ಲೇ ಮಾಡಿದಾಗ ಕೇಳಿ ಬಂದ ಕರಾಡತನಕ್ಕೆ ಎಲ್ಲೆ ಇರಲಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X