ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ಆಡಳಿತ ನೀಡಿದ ಸರ್ಕಾರಕ್ಕೆ ಜನರ ಪ್ರತ್ಯುತ್ತರ - ಸಿದ್ಧರಾಮಯ್ಯ

By Staff
|
Google Oneindia Kannada News

ಭ್ರಷ್ಟ ಆಡಳಿತ ನೀಡಿದ ಸರ್ಕಾರಕ್ಕೆ ಜನರ ಪ್ರತ್ಯುತ್ತರ - ಸಿದ್ಧರಾಮಯ್ಯ
ಜೆಡಿಎಸ್‌ ಬೆಂಬಲದ ಬಗ್ಗೆ ಜೇಟ್ಲಿ ಆಶಾವಾದ

ಬೆಂಗಳೂರು: ರಾಜ್ಯದಲ್ಲಿ ತೀವ್ರವಾಗಿದ್ದ ಬರಗಾಲವನ್ನು ಎದುರಿಸುವಲ್ಲಿ ಕೃಷ್ಣ ಸರ್ಕಾರ ವಿಫಲವಾಗಿತ್ತು. ರೈತರ ಮತ್ತು ಜನಸಾಮಾನ್ಯರ ಸಮಸ್ಯೆಗೆಳಿಗೆ ಸ್ಪಂದಿಸುವಲ್ಲಿ ಕಾಂಗ್ರೆಸ್‌ ಸೋತಿತ್ತು. ಆ ಕಾರಣದಿಂದಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್‌ ಸೋತಿದೆ ಎಂದು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ ವಿಶ್ಲೇಷಿಸಿದ್ದಾರೆ.

ಅತ್ಯಂತ ಭ್ರಷ್ಟ ಆಡಳಿತವನ್ನು ನೀಡಿದ್ದಕ್ಕೆ ಜನರು ಸರಿಯಾಗಿಯೇ ಪ್ರಕ್ರಿಯಿಸಿದ್ದಾರೆ. ಕೃಷ್ಣ ಸರ್ಕಾರದಿಂದ ಜನ ಎಷ್ಟು ರೋಸಿ ಹೋಗಿರುವುರರೆಂಬುದಕ್ಕೆ ಪ್ರಕಟವಾಗಿರುವ ಚುನಾವಣಾ ಫಲಿತಾಂಶವೇ ಪ್ರತ್ಯಕ್ಷ ನಿದರ್ಶನ ಎಂದು ಸಿದ್ಧರಾಮಯ್ಯ ಅವರು ಅಭಿಪ್ರಾಯ ಪಟ್ಟರು. ವಿಜಯೋತ್ಸವದ ನಂತರ ಮೈಸೂರಿನಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು- ಬಿಜೆಪಿಯ ಜೊತೆ ಸೇರಿ ಸರ್ಕಾರ ನಡೆಸುವಿರಾ ಎಂಬ ಪ್ರಶ್ನೆಗೆ ತಲೆ ಅಲ್ಲಾಡಿಸಿದರು.

ಇತ್ತ ಬಿಜೆಪಿ ನಾಯಕ ಅರುಣ್‌ ಜೇಟ್ಲಿ ಜಾತ್ಯತೀತ ಜನತಾದಳದ ಬೆಂಬಲ ತಮ್ಮ ಪಕ್ಷಕ್ಕೆ ದೊರಕುವ ಕುರಿತು ಆಶಾಭಾವ ವ್ಯಕ್ತಪಡಿಸಿದ್ದಾರೆ. ಸಿದ್ಧರಾಮಯ್ಯನವರ ಮಾತಿಗೆ ಹೆಚ್ಚಿನ ಅರ್ಥ ಕಲ್ಪಿಸಬೇಕಿಲ್ಲ ಎಂದು ಅವರು ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X