Get Updates
Get notified of breaking news, exclusive insights, and must-see stories!

ಮುಂದೆ ? ಉತ್ತರಕ್ಕೆ ಭಾನುವಾರದವರೆಗೂ ಕಾಯಿರಿ -ದೇವೇಗೌಡ

ಮುಂದೆ ? ಉತ್ತರಕ್ಕೆ ಭಾನುವಾರದವರೆಗೂ ಕಾಯಿರಿ -ದೇವೇಗೌಡ
ಎಲ್ಲ ಸಾಧ್ಯತೆಗಳನ್ನೂ ಮುಕ್ತವಾಗಿರಿಸಿಕೊಂಡಿರುವ ಜಾತ್ಯತೀತ ಜನತಾದಳ

ಬೆಂಗಳೂರು : ತ್ರಿಶಂಕು ವಿಧಾನಸಭೆ ರೂಪುಗೊಂಡಿರುವ ರಾಜ್ಯದಲ್ಲಿ ಸರ್ಕಾರ ರಚಿಸುವ ಅಥವಾ ಮತ್ತೆ ಚುನಾವಣೆ ಎದುರಿಸುವ ಕುರಿತು ಜಾತ್ಯತೀತ ಜನತಾದಳ ಭಾನುವಾರ (ಮೇ 16) ತನ್ನ ನಿರ್ಣಯ ಕೈಗೊಳ್ಳಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾದಳದ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಇದೊಂದು ಅತ್ಯಂತ ಸೂಕ್ಷ್ಮವಾಗಿದೆ. ತರಾತುರಿಯಲ್ಲಿ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ . ಪಕ್ಷದ ನಾಯಕರೊಂದಿಗೆ ಎಲ್ಲ ಸಾಧ್ಯತೆಗಳ ಕುರಿತು ಸಮಗ್ರ ಚರ್ಚೆ ನಡೆಸಿದ ನಂತರವೇ ತೀರ್ಮಾನ ಕೈಗೊಳ್ಳಲು ಸಾಧ್ಯ. ಭಾನುವಾರ ಈ ಬಗ್ಗೆ ಒಂದು ನಿರ್ಣಯಕ್ಕೆ ಬರಲಾಗುವುದು ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಹೇಳಿದರು.

ರಾಜ್ಯದಲ್ಲಿ ನಿರ್ಣಾಯಕ ಶಕ್ತಿಯಾಗಿ ಜಾತ್ಯತೀತ ಜನತಾದಳವನ್ನು ಜನತೆ ರೂಪಿಸಿದೆ. ಜನತೆಯ ಅಭಿಲಾಷೆಯಂತೆ ನಡೆಯಲಾಗುವುದು ಎಂದೂ ದೇವೇಗೌಡ ಹೇಳಿದರು.

ಪಕ್ಷದ ರಾಜಕೀಯ ವ್ಯವಹಾರಗಳ ಸಭೆ ಶುಕ್ರವಾರ ಸಂಜೆ ದೆಹಲಿಯಲ್ಲಿ ನಡೆಯುವುದು. ಈ ಸಭೆಯಲ್ಲಿ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲಾಗುವುದು. ಆನಂತರ ಪಕ್ಷದ ಶಾಸಕರ ಸಭೆ ಭಾನುವಾರ ಬೆಂಗಳೂರಿನಲ್ಲಿ ನಡೆಯುವುದು. ಈ ಸಭೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ ವಹಿಸಬೇಕಾದ ಪಾತ್ರದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು.

ರಾಜ್ಯದ ಮತದಾರ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳನ್ನು ತಿರಸ್ಕರಿಸಿದ್ದಾನೆ. ಜನರ ಅಭಿಲಾಷೆ ಸುಳ್ಳಾಗಲು ನಾವು ಬಿಡುವುದಿಲ್ಲ ಎಂದು ದೇವೇಗೌಡ ತಿಳಿಸಿದರು. ಬಿಜೆಪಿಯನ್ನು ಬೆಂಬಲಿಸುವಿರಾ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಹೇಳದ ದೇವೇಗೌಡ- ಸದ್ಯಕ್ಕೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+