ಹೃದಯ-ಸ್ನೇಹಕಸಿ; ಪಾಕ್ನಲ್ಲಿ ನಾರಾಯಣ ಹೃದಯಾಲಯ ಜಾಲ
ಹೃದಯ-ಸ್ನೇಹಕಸಿ; ಪಾಕ್ನಲ್ಲಿ ನಾರಾಯಣ ಹೃದಯಾಲಯ ಜಾಲ
2000 ಹಾಸಿಗೆ ಸಾಮರ್ಥ್ಯದ ಹೆಲ್ತ್ ಸಿಟಿ ನಿರ್ಮಿಸಲು ಡಾ.ದೇವಿಶೆಟ್ಟಿ ಯೋಜನೆ
ಟೆಲಿಮೆಡಿಸಿನ್ ಸಂಪರ್ಕದ ಮೂಲಕ ತಪಾಸಣೆ ನಡೆಸುವ ಕೇಂದ್ರವನ್ನು ಇನ್ನೊಂದು ತಿಂಗಳಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಪ್ರಾರಂಭಿಸಲಾಗುವುದು ಎಂದು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿಪ್ರಸಾದ್ ಶೆಟ್ಟಿ ಶನಿವಾರ (ಮೇ8) ಸುದ್ದಿಗಾರರಿಗೆ ತಿಳಿಸಿದರು. ಈ ಕುರಿತು ಕರಾಚಿಯ ಕೆಲವು ವೈದ್ಯರು ನಾರಾಯಣ ಹೃದಯಾಲಯವನ್ನು ಸಂಪರ್ಕಿಸಿದ್ದಾರೆ. ಐಎಸ್ಡಿಎನ್ ಲಿಂಕ್ ಮೂಲಕ ಪಾಕ್ನಲ್ಲಿನ ಹೃದ್ರೋಗಿಗಳಿಗೆ ಸಲಹೆ ನೀಡಲಾಗುವುದು ಎಂದು ಡಾ.ದೇವಿಶೆಟ್ಟಿ ಹೇಳಿದರು.
ಪಾಕಿಸ್ತಾನದ ಎರಡೂವರೆ ವರ್ಷದ ಪುಟಾಣಿ ನೂರ್ ಫಾತಿಮಾಳಿಗೆ ಹೃದಯ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ನಾರಾಯಣ ಹೃದಯಾಲಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು . ಜುಲೈ 2003 ರಲ್ಲಿ ಪ್ರಾರಂಭವಾದ ದೋಸ್ತಿ ಬಸ್ನಲ್ಲಿ ನೂರ್ ಫಾತಿಮಾ ಭಾರತಕ್ಕೆ ಚಿಕಿತ್ಸೆಗಾಗಿ ಆಗಮಿಸಿದ್ದಳು.
ಮಾಲ್ಡೀವ್ಸ್ , ಮಲೇಷಿಯಾ ಸೇರಿದಂತೆ ಒಟ್ಟು 22 ಟೆಲಿ ಮೆಡಿಸಿನ್ ಸೆಂಟರ್ಗಳನ್ನು ಹೊಂದಿರುವ ನಾರಾಯಣ ಹೃದಯಾಲಯ ಭಾರತದ ಪ್ರತಿಷ್ಠಿತ ಹೃದಯ ಚಿಕಿತ್ಸಾ ಕೇಂದ್ರಗಳಲ್ಲೊಂದಾಗಿದೆ. ಬಾಂಗ್ಲಾ , ಶ್ರೀಲಂಕಾ ಸೇರಿದಂತೆ ವಿದೇಶಗಳಿಂದ ಹೆಚ್ಚಿನ ಹೃದ್ರೋಗಿಗಳು ನಾರಾಯಣ ಹೃದಯಾಲಯಕ್ಕೆ ಬರುತ್ತಿದ್ದಾರೆ. ಇಲ್ಲಿನ ರೋಗಿಗಳಲ್ಲಿ ಶೇ.30 ಮಂದಿ ವಿದೇಶಿಯರಾಗಿದ್ದಾರೆ ಎಂದು ಡಾ.ದೇವಿಶೆಟ್ಟಿ ತಿಳಿಸಿದರು.
ಪ್ರತಿದಿನ 22 ಶಸ್ತ್ರಚಿಕಿತ್ಸೆಗಳನ್ನು ನಡೆಸುವ ನಾರಾಯಣ ಹೃದಯಾಲಯ, ಕಳೆದ ಮೂರು ವರ್ಷಗಳಲ್ಲಿ 9000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳ ನಡೆಸಿದೆ. ಇಲ್ಲಿ ನಡೆಯುವ ಶಸ್ತ್ರಚಿಕಿತ್ಸೆಗಳಲ್ಲಿ ಪ್ರತಿಶತ 40 ಸರ್ಜರಿಗಳು 12 ವರ್ಷದೊಳಗಿನ ಮಕ್ಕಳದ್ದಾಗಿರುತ್ತದೆ ಎಂದು ಡಾ.ದೇವಿ ಶೆಟ್ಟಿ ಹೇಳಿದರು.
ಹೆಲ್ತ್ ಸಿಟಿ : 2000 ಹಾಸಿಗೆಗಳ ಸಾಮರ್ಥ್ಯದ ಹೆಲ್ತ್ ಸಿಟಿ ನಿರ್ಮಿಸುವ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯನ್ನು ಡಾ.ದೇವಿಶೆಟ್ಟಿ ಸುದ್ದಿಗಾರರೊಂದಿಗೆ ಹಂಚಿಕೊಂಡರು. 250 ಕೋಟಿ ರುಪಾಯಿ ಈ ಯೋಜನೆ ಒಂದೂವರೆ ವರ್ಷಗಳಲ್ಲಿ ಪೂರೈಸುವ ಉದ್ದೇಶವಿದೆ. ಯೋಜನೆ ಪೂರ್ಣವಾದ ನಂತರ ಜಾಗತಿಕ ಆರೋಗ್ಯ ನಕ್ಷೆಯಲ್ಲಿ ಬೆಂಗಳೂರಿಗೆ ಮಹತ್ವದ ಸ್ಥಾನ ದೊರೆಯಲಿದೆ ಎಂದು ಡಾ.ದೇವಿಪ್ರಸಾದ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications