Get Updates
Get notified of breaking news, exclusive insights, and must-see stories!

ಹಾವೇರಿಯ ಬಂಕಾಪುರ ಸಮೀಪ ಭೀಕರ ಅಪಘಾತ, 8ಮಂದಿ ಸಾವು

ಹಾವೇರಿಯ ಬಂಕಾಪುರ ಸಮೀಪ ಭೀಕರ ಅಪಘಾತ, 8ಮಂದಿ ಸಾವು
ಮೂವರಿಗೆ ಗಾಯ, ಮೃತರ ಪಟ್ಟಿಯಲ್ಲಿ ಮೂವರು ಸ್ತ್ರೀಯರು ಹಾಗೂ ಮೂವರು ಮಕ್ಕಳು

ಬೆಂಗಳೂರು : ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು , ಮೂವರು ಗಾಯಗೊಂಡಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ಸು ಹಾಗೂ ಖಾಸಗಿ ವ್ಯಾನ್‌ ನಡುವೆ ಸಂಭವಿಸಿದ ಮುಖಾಮುಖಿಯಲ್ಲಿ ಈ ದುರಂತ ಸಂಭವಿಸಿದೆ. ವ್ಯಾನ್‌ನಲ್ಲಿದ್ದ ಎಂಟು ಮಂದಿ ಅಪಘಾತಕ್ಕೆ ಬಲಿಯಾಗಿದ್ದು- ಮೂವರು ಹೆಂಗಸರು ಹಾಗೂ ಮೂವರು ಮಕ್ಕಳು ಮೃತರಾದವರಲ್ಲಿ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಾನ್‌ನಲ್ಲಿದ್ದವರು ಹುಬ್ಬಳ್ಳಿಗೆ ತೆರಳುತ್ತಿದ್ದರು.

ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ . ಮಹಾರಾಷ್ಟ್ರದ ಕೊಲ್ಲಾಪುರಿಂದ ಬರುತ್ತಿದ್ದ ಈ ಬಸ್ಸು ಬೆಂಗಳೂರಿಗೆ ಹೊರಟಿತ್ತು . ಮೃತರ ಹೆಸರುಗಳು ತಿಳಿದುಬಂದಿಲ್ಲ .

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+