ಹಿರಿಯಡ್ಕ ಸಮೀಪ ಭಜರಂಗದಳ ಕಾರ್ಯಕರ್ತ ಕೊಲೆ ; ಬಂದ್ ಕರೆ
ಹಿರಿಯಡ್ಕ
ಸಮೀಪ
ಭಜರಂಗದಳ
ಕಾರ್ಯಕರ್ತ
ಕೊಲೆ
;
ಬಂದ್
ಕರೆ
ಸುಧಾಕರ
ನಾಯ್ಕ
ಕೊಲೆಗೆ
ವಿಹೆಚ್ಪಿ-ಭಜರಂಗದಳ
ಆಕ್ರೋಶ
ಸುಧಾಕರ ನಾಯ್ಕ ಎನ್ನುವ ಭಜರಂಗದಳದ ಕಾರ್ಯಕರ್ತ ಹಿರಿಯಡ್ಕದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗಿದ ಸಂದರ್ಭದಲ್ಲಿ (ಮೇ 5ರಂದು) ಈ ದಾಳಿ ನಡೆದಿದೆ. ದಾಳಿ ನಡೆಸಿದ ದುಷ್ಕರ್ಮಿಗಳು ತಕ್ಷಣವೇ ಪರಾರಿಯಾಗಿದ್ದಾರೆ ಎಂದು ಗುರುವಾರ ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೊಲೆಗೆ ಹಳೆಯ ದ್ವೇಷವೇ ಕಾರಣ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಮುರುಗನ್ ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪರಾಧಿಗಳ ಬಗ್ಗೆ ಕೆಲವು ಸುಳಿವುಗಳು ಪತ್ತೆಯಾಗಿವೆ, ದುಷ್ಕರ್ಮಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖೆ ಮುಂದುವರೆಸಿರುವ ಪೊಲೀಸರು ತಿಳಿಸಿದ್ದಾರೆ.
ಸುಧಾಕರ ನಾಯ್ಕ ಅವರ ಕೊಲೆಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಆಟೊರಿಕ್ಷಾ ಮಾಲಿಕರು ಚಾಲಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಘಟನೆಗಳು ಗುರುವಾರ (ಮೇ6) ಹಿರಿಯಡ್ಕ ಬಂದ್ಗೆ ಕರೆ ನೀಡಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು