Get Updates
Get notified of breaking news, exclusive insights, and must-see stories!

ಹಿರಿಯಡ್ಕ ಸಮೀಪ ಭಜರಂಗದಳ ಕಾರ್ಯಕರ್ತ ಕೊಲೆ ; ಬಂದ್‌ ಕರೆ

ಹಿರಿಯಡ್ಕ ಸಮೀಪ ಭಜರಂಗದಳ ಕಾರ್ಯಕರ್ತ ಕೊಲೆ ; ಬಂದ್‌ ಕರೆ
ಸುಧಾಕರ ನಾಯ್ಕ ಕೊಲೆಗೆ ವಿಹೆಚ್‌ಪಿ-ಭಜರಂಗದಳ ಆಕ್ರೋಶ

ಮಣಿಪಾಲ : ಇಲ್ಲಿಗೆ ಹದಿನೇಳು ಕಿಮೀ ದೂರದ ಗುಡ್ಡೆಯಂಗಡಿ (ಹಿರಿಯಡ್ಕದ ಸಮೀಪ)ಯಲ್ಲಿ ಭಜರಂಗದಳದ ಓರ್ವ ಕಾರ್ಯಕರ್ತನನ್ನು ದುಷ್ಕರ್ಮಿಗಳು ಕೊಂದಿದ್ದಾರೆ.

ಸುಧಾಕರ ನಾಯ್ಕ ಎನ್ನುವ ಭಜರಂಗದಳದ ಕಾರ್ಯಕರ್ತ ಹಿರಿಯಡ್ಕದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗಿದ ಸಂದರ್ಭದಲ್ಲಿ (ಮೇ 5ರಂದು) ಈ ದಾಳಿ ನಡೆದಿದೆ. ದಾಳಿ ನಡೆಸಿದ ದುಷ್ಕರ್ಮಿಗಳು ತಕ್ಷಣವೇ ಪರಾರಿಯಾಗಿದ್ದಾರೆ ಎಂದು ಗುರುವಾರ ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕೊಲೆಗೆ ಹಳೆಯ ದ್ವೇಷವೇ ಕಾರಣ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠ ಎಸ್‌.ಮುರುಗನ್‌ ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪರಾಧಿಗಳ ಬಗ್ಗೆ ಕೆಲವು ಸುಳಿವುಗಳು ಪತ್ತೆಯಾಗಿವೆ, ದುಷ್ಕರ್ಮಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖೆ ಮುಂದುವರೆಸಿರುವ ಪೊಲೀಸರು ತಿಳಿಸಿದ್ದಾರೆ.

ಸುಧಾಕರ ನಾಯ್ಕ ಅವರ ಕೊಲೆಗೆ ವಿಶ್ವ ಹಿಂದೂ ಪರಿಷತ್‌, ಭಜರಂಗದಳ ಹಾಗೂ ಆಟೊರಿಕ್ಷಾ ಮಾಲಿಕರು ಚಾಲಕರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಘಟನೆಗಳು ಗುರುವಾರ (ಮೇ6) ಹಿರಿಯಡ್ಕ ಬಂದ್‌ಗೆ ಕರೆ ನೀಡಿವೆ.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+