ಛಾಪಾಪಾಪಿ ತೆಲಗಿ ಕಾಂಗ್ರೆಸ್ ಕಾರ್ಯಕರ್ತ: ವಾಜಪೇಯಿ ಆರೋಪ
ಛಾಪಾಪಾಪಿ
ತೆಲಗಿ
ಕಾಂಗ್ರೆಸ್
ಕಾರ್ಯಕರ್ತ:
ವಾಜಪೇಯಿ
ಆರೋಪ
ಸರ್ಕಾರ
ನಡೆಸುವುದೆಂದರೆ
ಮಕ್ಕಳಾಟವಲ್ಲ
,
ಸೋನಿಯಾಗೆ
ಅಟಲ್
ಕೀಟಲೆ
ಭ್ರಷ್ಟಾಚಾರವನ್ನು ಕಾಂಗ್ರೆಸ್ ಬೆಳೆಸಿತು ಎಂದು ಪ್ರಧಾನಿ ವಾಜಪೇಯಿ ಬಣ್ಣಿಸಿದರು. ಇದಕ್ಕೆ ಉದಾಹರಣೆಯಾಗಿ ಛಾಪಾ ಪಾಪಿ ತೆಲಗಿಯನ್ನು ಉದಾಹರಿಸಿದ ವಾಜಪೇಯಿ- ಕಾಂಗ್ರೆಸ್ ಕಾರ್ಯಕರ್ತನಾದ ತೆಲಗಿ ಪ್ರಸ್ತುತ ಜೈಲಿನಲ್ಲಿದ್ದಾನೆ ಎಂದರು. ಅವರು ಮೇ3ರಂದು ಮಧ್ಯಪ್ರದೇಶದ ಖಜುರಾಹೊದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡುತ್ತಿದ್ದರು.
ಎನ್ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನಿ, ಗಾಜಿನ ಮನೆಯಲ್ಲಿ ಇರುವವರು ಇತರರ ಮೇಲೆ ಕಲ್ಲು ತೂರಬಾರದು ಎಂದರು.
ಭ್ರಷ್ಟಾಚಾರ ಒಂದು ಸಾಮಾಜಿಕ ಸಮಸ್ಯೆಯಾಗಿದ್ದು , ಇದರ ವಿರುದ್ಧ ಸಂಘಟಿತ ಹೋರಾಟ ಅವಶ್ಯಕವಾಗಿದೆ. ಆದರೆ, ಈ ಹೋರಾಟ ಅನನುಭವಿ ಸೋನಿಯಾಗಾಂಧಿ ಅವರಿಂದ ಅಸಾಧ್ಯ. ಸರ್ಕಾರವನ್ನು ನಡೆಸುವುದೆಂದರೆ ಮಕ್ಕಳಾಟವಲ್ಲ . ಒಂದು ಸಣ್ಣ ತಪ್ಪು ಕೂಡ ದೇಶ ಹಾಗೂ 100 ಕೋಟಿ ಜನತೆಯನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಮೇ 5ರಂದು ನಡೆಯುವ ಮೂರನೇ ಹಂತದ ಚುನಾವಣೆಯಲ್ಲಿ ಮಧ್ಯಪ್ರದೇಶದ 12 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004