ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದೆಲ್ಲೆಡೆ ಧಾರಾಕಾರ ಮಳೆ: ಗೋಡೆ-ಛಾವಣಿ ಕುಸಿದು ಏಳು ಸಾವು

By Staff
|
Google Oneindia Kannada News

ರಾಜ್ಯದೆಲ್ಲೆಡೆ ಧಾರಾಕಾರ ಮಳೆ: ಗೋಡೆ-ಛಾವಣಿ ಕುಸಿದು ಏಳು ಸಾವು
35 ರಿಂದ 25 ಡಿಗ್ರಿಗೆ ಇಳಿದ ಬೆಂಗಳೂರಿನ ತಾಪಮಾನ

ಬೆಂಗಳೂರು : ರಾಜ್ಯದಲ್ಲೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನೆಲದೊಡಲು ತಂಪಾಗಿದೆ. ಆದರೆ ಮಳೆಯ ತೀವ್ರತೆಗೆ ಏಳು ಮಂದಿ ಮೃತಪಟ್ಟಿದ್ದಾರೆ.

ನಗರದಲ್ಲಿ ಮೇ 3ರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸೂರ್ಯ ನೆತ್ತಿಗೇರುತ್ತಿದ್ದಂತೆ ತುಂತುರು ಸುರಿಯಲು ಆರಂಭಿಸಿದ ಮಳೆ ಮತ್ತೆ ಬಿರುಸಾಗ ತೊಡಗಿತು. ಇದರಿಂದ 35 ಡಿ. ಸಿ. ಇದ್ದ ತಾಪಾಮಾನ ಮುಸ್ಸಂಜೆಯ ಹೊತ್ತಲ್ಲಿ 25 ಡಿ.ಸಿ. ತಲುಪಿದೆ. ಕೆಲವೆಡೆ 9 ಸಿಸಿ ಡಿಗ್ರಿಗೂ ಇಳಿದಿರುವುದು ವರದಿಯಾಗಿದೆ.

ಬೆಂಗಳೂರಿನಲ್ಲಿ ಸೋಮವಾರ 12 ಮಿ.ಮೀ. ಮಳೆಯಾಗಿದೆ. ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಜನಗಳಿಗೆ, ರಜಾದ ಮಜಾದಲ್ಲಿದ್ದ ಮಕ್ಕಳಿಗೆ ಮಳೆ ತಂಪನ್ನೆರೆದಿದೆ. ಹೊರ ಊರಿನಿಂದ ಕೂಲಿಗಾಗಿ ಬಂದ ಕಾರ್ಮಿಕರು ಮತ್ತು ಕೊಳಚೆ ಪ್ರದೇಶ ವಾಸಿಗಳಿಗೆ ಮಿಶ್ರ ಅನುಭವ. ಒಂದೆಡೆ ಮಳೆ ತಂಪು ತಂಪಿತ್ತರೆ, ಇನ್ನೊಂದೆಡೆ ಸೂರು ಸೋರುತ್ತಿತ್ತು. ಅದು ಆಗಾಗ ಗಾಳಿಗೆ ಹಾರುತ್ತಿತ್ತು.

ಮಂಗಳೂರು

ಮಂಗಳೂರಿನಲ್ಲಿ ಮಳೆ ಧಾರಾಕಾರವಾಗಿ ಸುರಿದ ಕಾರಣ ನೆಹರೂ ಮೈದಾನ ಆವರಣದ ಗೋಡೆ ಕುಸಿದು ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮಳೆ ನೀರು ಹಾದುಹೋಗಲು ಜಾಗವಿಲ್ಲದ ಕಾರಣ ಮನೆಯಾಳಗೆ ನೀರು ನುಗ್ಗಿದೆ. ಇದರಿಂದ ಶಿಥಿಲಗೊಂಡ ಗೋಡೆ ಕುಸಿದಿದೆ ಎಂದು ಹೇಳಲಾಗಿದೆ.

ಮುಳಬಾಗಲು

ಇಲ್ಲಿಯ ಪಟ್ಟಣದ ಮತ್ಯಾಲ ಪೇಟೆಯ ಭಗತ್‌ಸಿಂಗ್‌ ರಸ್ತೆಯ ಮನೆಯಾಂದರ ಛಾವಣಿ ಕುಸಿದು ಬಿದ್ದು ಮಲಗಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮನೆ ಛಾವಣಿ ಕಲ್ಲಿನದ್ದಾಗಿತ್ತು. ಮಳೆ ಬಂದಾಗ ಗೋಡೆ ಛಾವಣಿಯ ಭಾರ ತಾಳಲಾರದೆ ಕುಸಿದಿದೆ.

ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ಉಂಟಾದ ವಾಯುಭಾರ ಕುಸಿತವೇ ಮಳೆಗೆ ಕಾರಣವಾಗಿದೆ. ಮಳೆಯ ಅಬ್ಬರ ರಾಜ್ಯದ ವಿವಿಧೆಡೆಗಳಲ್ಲಿ ಮಂಗಳವಾರವೂ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಡಾ.ಕೊಪ್ಪರ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X