ಕೂಡಲಸಂಗಮದಲ್ಲಿ ಮೇ 1-2 ರಾಷ್ಟ್ರೀಯ ಬಸವ ಧರ್ಮ ಸಮ್ಮೇಳನ
ಕೂಡಲಸಂಗಮದಲ್ಲಿ
ಮೇ
1-2
ರಾಷ್ಟ್ರೀಯ
ಬಸವ
ಧರ್ಮ
ಸಮ್ಮೇಳನ
ಚಿತ್ರದುರ್ಗ,
ಇಳಕಲ್
ಮಠಗಳಿಂದ
ಸಮ್ಮೇಳನ
ಏರ್ಪಾಡು
ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಇಳಕಲ್ನ ಮಹಾಂತ ಮಠದ ಬಸವಕೇಂದ್ರಗಳು ಮೇ 1 ಹಾಗೂ 2 ರಂದು ಪ್ರಥಮ ರಾಷ್ಟ್ರೀಯ ಬಸವ ಧರ್ಮ ಸಮ್ಮೇಳನವನ್ನು ಏರ್ಪಡಿಸಿವೆ. ಈ ಸಮ್ಮೇಳನದಲ್ಲಿ ಸಾವಿರಾರು ಬಸವ ಅನುಯಾಯಿಗಳು, ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸುವರು.
ಗೋವಾ, ತಮಳುನಾಡು, ಆಂಧರ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವರು. ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಆಹಾರ ಹಾಗೂ ವಸತಿಯ ಏರ್ಪಾಡನ್ನು ಕಲ್ಪಿಸಲಾಗಿದೆ ಎಂದು ಸಮ್ಮೇಳನದ ಆಯೋಜಕರು ತಿಳಿಸಿದ್ದಾರೆ.
ಇದೇ ಸಮಯದಲ್ಲಿ , ಮೇ 1ರಿಂದ ಬಸವ ಕಲ್ಯಾಣದಲ್ಲಿ ಮಾತೆ ಮಹಾದೇವಿ ನಡೆಸಲು ಉದ್ದೇಶಿಸಿರುವ ಕಲ್ಯಾಣ ಪರ್ವಕ್ಕೆ ಬೀದರ್ನ ಬಸವ ಕೇಂದ್ರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಬಸವ ಕೇಂದ್ರದ ಅಧ್ಯಕ್ಷ ಬರಸವರಾಜ ಭರಶೆಟ್ಟಿ ಈ ಕುರಿತು ಹೇಳಿಕೆ ನೀಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು