Get Updates
Get notified of breaking news, exclusive insights, and must-see stories!

ರಾಷ್ಟ್ರಪತಿ ಭವನದಲ್ಲಿ ನಾಳೆ ಕಥಕ್‌, ಓಡಿಸ್ಸಿ ಮತ್ತು ಭರತನಾಟ್ಯ !

ರಾಷ್ಟ್ರಪತಿ ಭವನದಲ್ಲಿ ನಾಳೆ ಕಥಕ್‌, ಓಡಿಸ್ಸಿ ಮತ್ತು ಭರತನಾಟ್ಯ !
ಏಳು ಕಲಾವಿದರು ಬರೆದ ಪುಸ್ತಕ ಕಲಾಂ ಅವರಿಗೆ ಅರ್ಪಣೆ

ನವದೆಹಲಿ : ಹಲವು ಪ್ರಥಮಗಳನ್ನು ಸಾಧಿಸಿದ ರಾಷ್ಟ್ರಪತಿ ಕಲಾಮ್‌ ಈಗ ಹೊಸದೊಂದು ದಾಖಲೆಯನ್ನು ಬರೆಯಲಿದ್ದಾರೆ.

ಸಿಯಾಚಿನ್‌ಗೆ ಹೋದ ಪ್ರಥಮ ರಾಷ್ಟ್ರಪತಿ, ಗಡಿ-ನಿಯಂತ್ರಣ ರೇಖೆಗೆ ಭೇಟಿ ನೀಡಿದ ಪ್ರಥಮ ರಾಷ್ಟ್ರಪತಿ, ಯೋಗ್ಯ ಅಭ್ಯರ್ಥಿಗಳಿಗೆ ಮತದಾನ ಮಾಡಲು ದೇಶಕ್ಕೆ ಕರೆ ನೀಡಿದ ಪ್ರಥಮ ರಾಷ್ಟ್ರಪತಿ ಹೀಗೆ ದೇಶದ ಸಂವಿಧಾನಾತ್ಮಕ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿ ಮಾದರಿಯಾದ ಕಲಾಂ ಈಗ ನೃತ್ಯಕ್ಕೆ ಸಲಾಂ ಮಾಡಿದ್ದಾರೆ.

ಎಪ್ರಿಲ್‌ 29ರ ಗುರುವಾರ ದೆಹಲಿಯ ರಾಷ್ಟ್ರಪತಿ ಭವನ ಸಭಾಂಗಣದಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನದ ಅಂತರಾಷ್ಟ್ರೀಯ ನಾಟ್ಯದಿನವನ್ನು ಆಯೋಜಿಸಿದ್ದಾರೆ.

ಕಥಕ್‌ ನಾಟ್ಯಗಾರ್ತಿ ಶೋವನಾ ನಾರಾಯಣ್‌, ಓಡಿಸ್ಸಿ ನಾಟ್ಯಮಣಿ ಶರೋನ್‌ ಲೋವೆನ್‌, ಕರ್ನಾಟಕದ ಭರತನಾಟ್ಯ ಪ್ರವೀಣೆ ಪ್ರತಿಭಾ ಪ್ರಹ್ಲಾದ್‌, ಕಥಕಳಿ ಪ್ರವೀಣೆ ಸದಾನಂ ಬಾಲಕೃಷ್ಣನ್‌, ಮೋಹಿನಿಯಾಟ್ಟಂ ಕಲಾವಿದೆ ಭಾರತಿ ಸಿವಾಜಿ, ವಿಜಯಲಕ್ಷ್ಮಿ ಮಣಿಪುರಿ ನೃತ್ಯಗಾರ್ತಿ ಶಿಂಗಾಜಿತ್‌ ಸಿಂಗ್‌ ರಾಷ್ಟ್ರಪತಿ ಭವನದಲ್ಲಿ ಆಹ್ವಾನಿತ ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡಲಿರುವರು.

ಭಾರತೀಯ ನಾಟ್ಯ ಶಾಸ್ತ್ರದ ಮೇಲೆ ಈ ಏಳು ಕಲಾವಿದರು ಬರೆದ ಪುಸ್ತಕವೊಂದನ್ನು ಈ ಸಂದರ್ಭದಲ್ಲಿ ರಾಷ್ಟ್ರಪತಿಗೆ ಅರ್ಪಿಸಲಾಗುವುದು. ಈ ಪುಸ್ತಕವು ಭಾರತೀಯ ನೃತ್ಯದ ಇತಿಹಾಸ, ಹುಟ್ಟು , ಸಂಗೀತ, ಶೈಲಿ ಮುಂತಾದ ವಿಷಯದ ಕುರಿತು ಚರ್ಚಿಸಲಿದೆ. ಅಷ್ಟಲ್ಲದೆ ರಾಷ್ಟ್ರಪತಿಗಳು ರಚಿಸಿದ ಎರಡು ಕವನಗಳ ಮೇಲೆ ನೃತ್ಯ ಸಂಯೋಜನೆ ಮಾಡಿ ಪ್ರದರ್ಶಿಸಲಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+