Get Updates
Get notified of breaking news, exclusive insights, and must-see stories!

‘ಅಟಲ್‌ ಎಂಬ ಹಳೇಬೇರು’ ನೋಡಿ ನಕ್ಕ ಹೊಸ ಚಿಗುರು ಪ್ರಿಯಾಂಕ

‘ಅಟಲ್‌ ಎಂಬ ಹಳೇಬೇರು’ ನೋಡಿ ನಕ್ಕ ಹೊಸ ಚಿಗುರು ಪ್ರಿಯಾಂಕ
ರಾಯ್‌ಬರೇಲಿಯಲ್ಲಿ ಸೋನಿಯಾ ಗೆಲುವು ನಿಶ್ಚಯ, ಪ್ರಿಯಾಂಕ ವಿಶ್ವಾಸ

ರಾಯ್‌ಬರೇಲಿ : ದೇಶದ ನಾಯಕ ಯಾವತ್ತೂ ಬಲಿಷ್ಠನಾಗಿರಬೇಕು. ಆದರೆ, ಪ್ರಧಾನಿ ವಾಜಪೇಯಿಗೆ ವಯಸ್ಸಾಗಿದೆ ಮತ್ತು ಅವರು ದುರ್ಬಲರಾಗಿದ್ದಾರೆ. ಆ ಕುರಿತು ಮತ್ತೇನನ್ನು ಮಾತನಾಡಲು ನಾನು ಇಷ್ಟಪಡುವುದಿಲ್ಲ ಎಂದು ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕ ಛೇಡಿಸಿದ್ದಾರೆ.

ತಮ್ಮ ತಾಯಿ ಹಾಗೂ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧಿಸಿರುವ ರಾಯ್‌ ಬರೇಲಿ ಕ್ಷೇತ್ರದಲ್ಲಿ ಮತದಾನ ವೀಕ್ಷಣೆ ನಡೆಸಿದ ಸಂದರ್ಭದಲ್ಲಿ (ಏ.26) ಪ್ರಿಯಾಂಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ವಾಜಪೇಯಿ ಅವರನ್ನು ಟೀಕಿಸಿದರು.

ವಾಜಪೇಯಿ ಅವರರೊಬ್ಬ ಹಿಂದೂ ರಾಷ್ಟ್ರೀಯವಾದಿ. ಆರ್‌.ಎಸ್‌.ಎಸ್‌ ಸ್ವಯಂಸೇವಕ ಎಂದ ಮೇಲೆ ಬೇರೆ ಹೇಳುವುದೇನಿದೆ ? ಅರ್ಥವಾಗುವುದಿಲ್ಲವೇ? ಸ್ವಾಭಾವಿಕವಾಗಿ ಅವರು ಅದೇ ರಾಜಕೀಯವನ್ನು ಮಾಡುತ್ತಾರೆ ಎಂದು ಪ್ರಿಯಾಂಕ ನುಡಿದರು.

ರಾಯ್‌ಬರೇಲಿ ಸಂಪ್ರದಾಯದಂತೆ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಅಮ್ಮನ ಗೆಲುವು ನಿಶ್ಚಲ. ಆದರೆ ರಾಜ್ಯದಲ್ಲಿ ಆಡಳಿತವಿರುವ ಸಮಾಜವಾದಿ ಪಕ್ಷವು ಕಾಂಗ್ರೆಸ್‌ ಕಾರ್ಯಕರ್ತರಿಗೆ ಆಮಿಷವೊಡ್ಡುತ್ತಿದೆ ಎಂದು ಪ್ರಿಯಾಂಕ ಆರೋಪಿಸಿದರು.

ರಾಯ್‌ಬರೇಲಿ ಕ್ಷೇತ್ರವನ್ನು ಸೂಕ್ಷ್ಮ ಪ್ರದೇಶವೆಂದು ಆಯೋಗ ಘೋಷಿಸಿ, 173 ಮತಗಟ್ಟೆಗಳಿಗೆ ಅತಿಸೂಕ್ಷ್ಮ ಭದ್ರತೆ ಒದಗಿಸಿತ್ತು. ಕ್ಷೇತ್ರದೆಲ್ಲಡೆ ಸಂಚರಿಸಿದ ಪ್ರಿಯಾಂಕಾ, ಸಂದು ಗೊಂದುಗಳೆನ್ನದೆ ಗಲ್ಲಿ-ಗಲ್ಲಿಯಲ್ಲಿ ಸಂಚರಿಸಿದರು. ಭದ್ರತೆಯನ್ನು ಲೆಕ್ಕಿಸದೆ ಜನರೊಂದಿಗೆ ಬೆರೆತರು.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+