ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೋತ್ತರ ಸಮೀಕ್ಷೆ ಪ್ರಕಟಣೆತಡೆಗೆ ಸುಪ್ರಿಂಕೋರ್ಟ್‌ ನಕಾರ

By Staff
|
Google Oneindia Kannada News

ಚುನಾವಣೋತ್ತರ ಸಮೀಕ್ಷೆ ಪ್ರಕಟಣೆತಡೆಗೆ ಸುಪ್ರಿಂಕೋರ್ಟ್‌ ನಕಾರ
ಕೇಂದ್ರ ಸರ್ಕಾರ, ಚುನಾವಣಾ ಆಯೋಗ, ವಿವಿಧ ವಾಹಿನಿಗಳಿಗೆ ನೋಟೀಸ್‌ ಜಾರಿ

ನವದೆಹಲಿ : ಚುನಾವಣೋತ್ತರ ಸಮೀಕ್ಷೆಗಳ ಪ್ರಕಟಣೆ ಹಾಗೂ ಪ್ರಸಾರವನ್ನು ನಿಷೇಧಿಸಲು ಸುಪ್ರಿಂಕೋರ್ಟ್‌ ನಿರಾಕರಿಸಿದೆ.

ನ್ಯಾಯಮೂರ್ತಿ ಎಸ್‌.ರಾಜೇಂದ್ರ ಬಾಬು ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಚುನಾವಣಾ ಸಮೀಕ್ಷೆಗಳಿಗೆ ಸಂಬಂಧಿಸಿದ ಮಹತ್ವದ ತೀರ್ಮಾನವನ್ನು ಏ.26ರ ಸೋಮವಾರ ಪ್ರಕಟಿಸಿತು. ಮೇ 10ರಂದು ನಡೆಯುವ ಅಂತಿಮ ಹಂತದ ಚುನಾವಣೆ ಮುಗಿಯುವವರೆಗೂ ಸಮೀಕ್ಷೆಗಳ ಪ್ರಸಾರ, ಪ್ರಕಟಣೆಯನ್ನು ತಡೆಗಟ್ಟುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿಹಾಕಿದ ನ್ಯಾಯಪೀಠ, ಸಮೀಕ್ಷೆಗಳ ಪ್ರಕಟಣೆಗೆ ಹಸಿರು ನಿಶಾನೆ ತೋರಿತು.

ಸಮೀಕ್ಷೆಗಳ ಪ್ರಸಾರ-ಪ್ರಕಟಣೆ ಸಂಬಂಧ ತಮ್ಮ ನಿಲುವುಗಳನ್ನು ತಿಳಿಸುವಂತೆ- ಕೇಂದ್ರ ಸರ್ಕಾರ, ಚುನಾವಣಾ ಆಯೋಗ, ಭಾರತೀಯ ಪ್ರೆಸ್‌ ಕೌನ್ಸಿಲ್‌ ಹಾಗೂ ವಿವಿಧ ವಾಹಿನಿಗಳಿಗೆ ನ್ಯಾಯಪೀಠ ನೋಟೀಸ್‌ ಜಾರಿ ಮಾಡಿದೆ.

(ಏಜನ್ಸೀಸ್‌)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X