Get Updates
Get notified of breaking news, exclusive insights, and must-see stories!

ಅಪಘಾತದಲ್ಲಿ ಇಬ್ಬರು ಸಾವು, ಮಾಜಿ ಸಚಿವ ಸರ್‌ನಾಯಕ್‌ ಪಾರು

ಅಪಘಾತದಲ್ಲಿ ಇಬ್ಬರು ಸಾವು, ಮಾಜಿ ಸಚಿವ ಸರ್‌ನಾಯಕ್‌ ಪಾರು
ಕಾರಿನ ಚಕ್ರ ಸ್ಫೋಟಿಸಿ ಸಂಭವಿಸಿದ ದುರಂತ

ಬಿಜಾಪುರ : ಸಿಂಧಗಿ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾಗಲಕೋಟೆ ವಿಧಾನಸಭಾ ಕಾಂಗ್ರೆಸ್‌ ಆಭ್ಯರ್ಥಿ, ಮಾಜಿ ಸಚಿವ ಅಜಯಕುಮಾರ್‌ ಸರ್‌ನಾಯಕ್‌ ಅವರೊಂದಿಗೆ ಪ್ರಯಾಣಿಸುತ್ತಿದ್ದ ಇಬ್ಬರು ನಿಧನರಾಗಿದ್ದಾರೆ.

ಸಿಂಧಗಿ ಕ್ರಾಸ್‌ ಸಮೀಪ ಈ ಘೋರ ಅಪಘಾತ ಸಂಭವಿಸಿದೆ (ಏ.22ರಂದು). ಸಚಿವರು ಸಂಚರಿಸುತ್ತಿದ್ದ ಕಾರಿನ ಚಕ್ರ ಸ್ಫೋಟಿಸಿದ ಪರಿಣಾಮವಾಗಿ ಎದುರು ಬರುತ್ತಿದ್ದ ಟಿಪ್ಪರಿಗೆ ಕಾರು ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಚುನಾವಣೆಯ ನಿಮಿತ್ತ ಸಚಿವರೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರು ಸ್ಥಳದಲ್ಲೇ ಅಸುನೀಗಿದ್ದಾರೆ. ತಲೆಗೆ ಗಾಯಗೊಂಡಿರುವ ಅಜಯ್‌ಕುಮಾರ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+