Get Updates
Get notified of breaking news, exclusive insights, and must-see stories!

ರಾಜ್ಯದ ವಿವಿಧೆಡೆ ಭಾರೀ ಆಲಿಕಲ್ಲು ಮಳೆ ; ಸಿಡಿಲು ಬಡಿ-ದು 8 ಸಾವು

ರಾಜ್ಯದ ವಿವಿಧೆಡೆ ಭಾರೀ ಆಲಿಕಲ್ಲು ಮಳೆ ; ಸಿಡಿಲು ಬಡಿ-ದು 8 ಸಾವು
ವಸ್ತು ಪ್ರದರ್ಶನದ ಶಾಮಿಯಾನ ಕುಸಿದು ಪರದಾಡಿದ ಜನ

ಬೆಂಗಳೂರು : ಕಳೆದೆರಡು ದಿನಗಳಿಂದ ರಾಜ್ಯದ ವಿವಿಧೆಡೆಗಳಲ್ಲಿ ಭಾರೀ ಪ್ರಮಾಣದ ಆಲಿಕಲ್ಲಿನ ಮಳೆ ಸುರಿದಿದ್ದು, ಸಿಡಿಲ ಹೊಡೆತಕ್ಕೆ 8 ಜನರು ಬಲಿಯಾಗಿದ್ದಾರೆ.

ನೆಲಮಂಗಲದ ಬಳಿ ಇಬ್ಬರು, ಮೈಸೂರಿನಲ್ಲಿ ಇಬ್ಬರು, ಗುಲ್ಬರ್ಗ ಜಿಲ್ಲೆಯಲ್ಲಿ ಮೂವರು ಸಿಡಿಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಏ.22ರ ಗುರುವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು , ಮಳೆಯ ಆರ್ಭಟಕ್ಕೆ ಸಿಲುಕಿ 150 ಮರಗಳು ಉರುಳಿವೆ. ಆದರೆ ಯಾವುದೇ ಸಾವುನೋವಿನ ಘಟನೆಗಳು ವರದಿಯಾಗಿಲ್ಲ ಎಂದು ಪೊಲೀಸ್‌ ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ತಿಳಿಸಿದ್ದಾರೆ.

ವಸ್ತು ಪ್ರದರ್ಶನಕ್ಕೆ ವರುಣನ ಅವಕೃಪೆ : ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಗ್ರಾಹಕರ ವಸ್ತು ಪ್ರದರ್ಶನದ ಶಾಮಿಯಾನ ಕುಸಿದು ಬಿದ್ದು, ಸುಮಾರು 200 ಮಂದಿ ಎರಡು ಗಂಟೆಗಳ ಕಾಲ ಒಳಗಡೆ ಸಿಕ್ಕಿ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+