ಕೃಷ್ಣಪ್ಪನ ಹೆಂಡತಿ ಮುಮ್ತಾಜ್, ಇಸ್ಮಾಯಿಲ್ ಪುತ್ರ ಮಲ್ಲಿಕಾರ್ಜುನ..!
ಕೃಷ್ಣಪ್ಪನ ಹೆಂಡತಿ ಮುಮ್ತಾಜ್, ಇಸ್ಮಾಯಿಲ್ ಪುತ್ರ ಮಲ್ಲಿಕಾರ್ಜುನ..!
ಮತದಾನ ಮಾಡಲು ಹೋಗಿ ಇಂಗುತಿಂದ ಮಂಗನಂತಾದವರ ಕಥೆ.
ಇಂತಹ ಹಲವು ಘೋಷಣೆಗಳನ್ನು ಎಡೆಬಿಡದೆ ನೋಡಿ ಕೇಳಿ ಮತದಾನ ಮಾಡಲು ಹೋದ ಕೆಲವರ ಪರಿಸ್ಥಿತಿ ಯಾರಿಗೂ ಬೇಡ. ್ಫ ಸಾವಿರಾರು ಜನರಿಗೆ ಮತದಾನ ಮಾಡಲು ಸಾಧ್ಯವಾಗಲೇ ಇಲ್ಲ . ಕಾರಣ ಮತಪಟ್ಟಿಯಲ್ಲಿ ಹೆಸರಿರಲಿಲ್ಲ . ಚುನಾವಣಾ ಆಯೋಗವೇ ದಯಪಾಲಿಸಿದ್ದ ಗುರುತಿನ ಚೀಟಿಗೆ ಕವಡೆ ಕಿಮ್ಮತ್ತೂ ಇರಲಿಲ್ಲ .
ಹಲವೆಡೆ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತದಾನಕ್ಕೆ ಅವಕಾಶ ದೊರೆಯಲಿಲ್ಲ. ನಗರದ ಚಾಮರಾಜಪೇಟೆಯಲ್ಲಿ ಮತದಾನ ವಂಚಿತರು ಚುನಾವಣಾ ಅಧಿಕಾರಿಗಳಿಗೆ ಘೕರಾವ್ ಹಾಕಿದ ಘಟನೆ ನಡೆಯಿತು. ದಕ್ಷಿಣ ಬೆಂಗಳೂರು ಲೋಕಸಭಾ ಅಭ್ಯರ್ಥಿ ಜಯಂತಿ ಕೆಲವು ನೊಂದ ಮತದಾರರನ್ನು ಸಂತೈಸಿ, ಈ ಕುರಿತು ಆಯೋಗದ ಗಮನ ಸೆಳೆಯುವುದಾಗಿ ಹೇಳಿದರು.
ಬಿನ್ನಿಪೇಟೆ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಹೆಸರು ನಾಪತ್ತೆಯಾಗಿತ್ತು. ಇಲ್ಲಿಯ ಹಲವು ಅಲ್ಪ ಸಂಖ್ಯಾಕರ ಹೆಸರನ್ನು ವಿ. ಸೋರ್ಮಣ್ಣ ಅವರು ಮತಪಟ್ಟಿಯಿಂದ ತೆಗೆಸಿಧಿಹಾಕಿದ್ದಾರೆ ಎಂದು ಜೆಡಿಎಸ್ ಆಭ್ಯರ್ಥಿ ಅಬ್ದುಲ್ ಅಜೀಂ ಆರೋಪಿಸಿದ್ದಾರೆ.
ಉಳಿದಂತೆ ಕೋಲಾರದ ಮಾಲೂರಿನಲ್ಲಿ , ವರ್ತೂರಿನ ದೊಡ್ಡ ನಕುಂದಿಯಲ್ಲಿ ಮತದಾರರಿಗೆ ನಿರಾಶೆ ಕಾದಿತ್ತು. ಬೆಂಗಳೂರಿನ ಇಂದಿರಾ ನಗರ, ವಿಜಯನಗರ, ತ್ಯಾಗರಾಜನಗರ, ಬಸವನಗುಡಿ ಮುಂತಾದೆಡೆ ನಿರಾಶೆ ಮತ್ತು ಆಕ್ರೋಶದಿಂದ ಹಲವು ಮತದಾರರು ಮನೆಗೆ ತೆರಳಿದರು.
ನಾಪತ್ತೆ ಯಾದುದು ಹೆಸರಷ್ಟೇ ಅಲ್ಲ !
ಪಟ್ಟಿಯಿಂದ ಹೆಸರು ಮಾತ್ರ ನಾಪತ್ತೆಯಾಗಲಿಲ್ಲ. ಕೆಲವರದು ಹೆಸರು ಬದಲಾಯಿಸಲ್ಪಟ್ಟರೆ, ಕೆಲವರ ತಂದೆ ಬದಲಾಗಿದ್ದಾರೆ. ಇನ್ನು ಕೆಲವರು ಜಾತಿ ಬದಲಾಯಿಸಿದ್ದಾರೆ. ತಂದೆ ಮತ್ತು ಮಗನ ಜಾತಿ ಬೇರೆ-ಬೇರೆಯಾಗಿ ದಾಖಲಾಗಿದೆ. ಕೃಷ್ಣಪ್ಪನಿಗೆ ಮುಮ್ತಾಜ್ ಪತ್ನಿಯಾದರೆ,ಇಸ್ಮಾಯಿಲ್ಗೆ ಮಲ್ಲಿಕಾರ್ಜುನ ಮಗನಾದದ್ದೂ ಇದೆ. ಕನಿಷ್ಠ ಮತಪಟ್ಟಿಯಧಿಲ್ಲಾದರೂ ಕೋಮು ಸೌಹಾರ್ದತೆ ಸಾಧ್ಯವಾಯಿತೆಂದು ಖುಷಿ ಪಡೋಣವಾ ?
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications