Get Updates
Get notified of breaking news, exclusive insights, and must-see stories!

ಚುನಾವಣಾ ಚಿತ್ರಗಳು : ಚಿತ್ರದುರ್ಗದಿಂದ ರಾಯಚೂರಿನವರೆಗೆ....

ಚುನಾವಣಾ ಚಿತ್ರಗಳು : ಚಿತ್ರದುರ್ಗದಿಂದ ರಾಯಚೂರಿನವರೆಗೆ....
ಲಿಂಗಸೂಗೂರಿನಲ್ಲಿ ಇರಿತ, ಮಾನ್ವಿಯಲ್ಲಿ 26 ಜನರ ಬಂಧನ

ಬೆಂಗಳೂರು : ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದಂತೆ, ರಾಜ್ಯದ ಎಲ್ಲೆಡೆ ಶಾಂತಿಯುತ ಮತದಾನ ನಡೆದಿದೆ. ಕೆಲ ಕ್ಷೇತ್ರಗಳಲ್ಲಿ ಮಾತ್ರ ಪೊಲೀಸರ ಬಿಗಿ ಬಂದೋಬಸ್ತ್‌ ನಡುವೆಯೂ ಹಿಂಸಾತ್ಮಕ ಕೃತ್ಯಗಳು ನಡೆದಿವೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನನ್ನು ಚೂರಿಯಿಂದ ಇರಿಯಲಾಗಿದೆ. ಮಾರಕಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮಾನ್ವಿಯಲ್ಲಿ 26 ಜನರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ರಾಜ್ಯದ ದಾವಣಗೆರೆ, ತುಮಕೂರು, ಕನಕಪುರ, ಬೀದರ್‌, ಗುಲ್ಬರ್ಗ ಮುಂತಾದ ಕಡೆಗಳಲ್ಲಿ ಮತದಾನವು ಶಾಂತಿಯುತವಾಗಿ ನಡೆದಿದೆ.

ಸಚಿವ ಡಿ.ಕೆ.ಶಿವಕುಮಾರ್‌ ಸ್ಪರ್ಧಿಸಿರುವ ಪ್ರತಿಷ್ಠಿತ ಸಾತನೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರಯಾಣಿಸುತ್ತಿದ್ದ 8-10 ಬಸ್ಸುಗಳನ್ನು ಜಾತ್ಯತೀತ ದಳದ ಕಾರ್ಯಕರ್ತರು ತಡೆದು ನಿಲ್ಲಿಸಿದರು. ಇದರಿಂದಾಗಿ, ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು, ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಬಿಸಿಲ ಬೇಗೆ-ಕೆಲವೆಡೆ ನೀರಸ : ಹೈದರಾಬಾದ್‌ ಕರ್ನಾಟಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಸಿಲ ತೀವ್ರತೆಯಿಂದ ಜನರು ಮತ ಚಲಾವಣೆ ಅಡ್ಡಿ ಉಂಟಾಯಿತು. ಬಳ್ಳಾರಿಯಲ್ಲಿ ಸಹ ಮತದಾನ ನೀರಸವಾಗಿತ್ತು .

ಶ್ರೀನಿವಾಸಪುರದಲ್ಲಿ ಕಲಹ : ನಾಯಕರುಗಳ ಪಕ್ಷಾಂತರದಿಂದ ತೀವ್ರ ಕುತೂಹಲ ಕೆರಳಿಸಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಿಂದ ಮತದಾನಕ್ಕೆ ಅಡಚಣೆ ಉಂಟಾಯಿತು.

ಮತಯಂತ್ರಗಳಲ್ಲಿನ ತಾಂತ್ರಿಕ ದೋಷದಿಂದಾಗಿ ಬಳ್ಳಾರಿಯ ಮತಗಟ್ಟೆ ಸಂಖ್ಯೆ 139 ರಲ್ಲಿ ಎರಡು ಗಂಟೆಗಳ ಕಾಲ ಮತದಾನ ಸ್ಥಗಿತವಾಗಿತ್ತು . ಚಿತ್ರದುರ್ಗದಲ್ಲಿ ಗುರುತಿನ ಚೀಟಿ ಇದ್ದರೂ ಮತದಾರ ಪಟ್ಟಿಯಲ್ಲಿ ಹೆಸರಿರದವರು ಮತದಾನ ಮಾಡಲಾಗದೆ ನಿರಾಶರಾದರು. ಗುಂಪುಗೂಡಿದ್ದ ಜನರನ್ನು ಚದುರಿಸಲು ಪೊಲೀಸರು ಬೆತ್ತ ಬೀಸಿದರು.

ಕಾಂಗ್ರೆಸ್ಸಿಗೇ ಓಟು ಹಾಕಿ : ದೊಡ್ಡಬಳ್ಳಾಪುರ ಬಳಿಯ ಗೌಡಗೆರೆ ಮತಗಟ್ಟೆ ಮತ್ತು ಕೊಪ್ಪಳಗಳಲ್ಲಿ ಮತದಾರರನ್ನು ಕಾಂಗ್ರೆಸ್ಸಿಗೇ ಓಟು ಹಾಕಿರೆಂದು ಪಕ್ಷದ ಕಾರ್ಯಕರ್ತರು ಬಲವಂತ ಮಾಡಿದರು ಎಂದು ಪ್ರತಿಪಕ್ಷಗಳ ನಾಯಕರು ಪಾದಿಸಿದ್ದಾರೆ.

ಕೊಪ್ಪಳದ ಮತಗಟ್ಟೆಯಾಂದರಲ್ಲಿ ಚುನಾವಣಾಧಿಕಾರಿಯೇ ಕಾಂಗ್ರೆಸ್‌ ಪರ ಮತ ಯಾಚಿಸತೊಡಗಿದಾಗ ಬಿಜೆಪಿ ಹಾಗೂ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿವಾದಿತ ಅಧಿಕಾರಿಯನ್ನು ಚುನಾವಣಾ ಕಾರ್ಯದಿಂದ ವಾಪಸ್ಸು ಪಡೆದ ನಂತರ ಚುನಾವಣೆ ಮುಂದುವರೆಯಿತು.

ಚನ್ನಗಿರಿ : ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌.ಪಟೇಲರ ಪುತ್ರ ಮಹಿಮಾ ಪಟೇಲ್‌ ಸ್ಪರ್ಧಿಸಿರುವ ಚನ್ನಗಿರಿ ವಿಧನಸಭಾ ಕ್ಷೇತ್ರದಲ್ಲೂ ನಕಲಿ ಮತದಾನದ ಘಟನೆಗಳು ವರದಿಯಾಗಿವೆ. ಮಹಿಮಾ ಪಟೇಲ್‌ರ ಬೆಂಬಲಿಗರು ಇತರ ಮತದಾರರ ವೋಟುಗಳನ್ನು ಅಕ್ರಮವಗಿ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಪಾದಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+