ವಚನಭ್ರಷ್ಟ ಎನ್ಡಿಎ ಕಿತ್ತೊಗೆಯಿರಿ, ಕಾಂಗ್ರೆಸ್ ಗೆಲ್ಲಿಸಿ -ಸೋನಿಯಾ
ವಚನಭ್ರಷ್ಟ ಎನ್ಡಿಎ ಕಿತ್ತೊಗೆಯಿರಿ, ಕಾಂಗ್ರೆಸ್ ಗೆಲ್ಲಿಸಿ -ಸೋನಿಯಾ
ಕಾಂಗ್ರೆಸ್ ಪರ ರಾಜ್ಯದಲ್ಲಿ ಸೋನಿಯಾಗಾಂಧಿ ಭರಾಟೆಯ ಪ್ರಚಾರ
ಎನ್ಡಿಎ ಸರ್ಕಾರ ಕಳೆದ ಐದು ವರ್ಷಗಳ ಆಡಳಿತದಲ್ಲಿ ಜನತೆಯ ಹಿತಾಸಕ್ತಿ ರಕ್ಷಿಸುವಲ್ಲಿ ವಿಫಲವಾಗಿದೆ. ಎಲ್ಲ ರಂಗಗಳಲ್ಲಿಯೂ ಸರ್ಕಾರದ ಸಾಧನೆ ಶೂನ್ಯವಾಗಿದ್ದು , ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿಯೂ ಸರ್ಕಾರ ಯಶಸ್ಸು ಗಳಿಸಿಲ್ಲ . ಇಂಥ ವಚನಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಸೋನಿಯಾ ಗಾಂಧಿ ಹೇಳಿದರು. ಅವರು ಕೋಲಾರದ ಸರ್ಕಾರಿ ವಿಜ್ಞಾನ ಕಾಲೇಜು ಸಭಾಂಗಣದಲ್ಲಿ ನಡೆದ ಭಾರೀ ರ್ಯಾಲಿಯನ್ನುದ್ದೇಶಿಸಿ ಏ.16ರ ಶುಕ್ರವಾರ ಮಾತನಾಡುತ್ತಿದ್ದರು.
ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಅನುವಾಗುವಂತೆ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸುವಂತೆ ಸೋನಿಯಾ ಜನತೆಯನ್ನು ಕೋರಿದರು. ದೇಶದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಎನ್ಡಿಎ ಹೇಳಿತ್ತು . ಆದರಿಂದು ಒಂದು ಕೋಟಿ ಮಂದಿ ಬೀದಿಗೆ ಬಂದು ನಿಂತಿದ್ದಾರೆ. ಬೆಲೆ ಹೆಚ್ಚಳದಿಂದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಮಂದಿ ಕಂಗಾಲಾಗಿದ್ದಾರೆ ಎಂದು ದೂರಿದ ಸೋನಿಯಾ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಇಂತಹ ಪರಿಸ್ಥಿತಿ ಇರಲಿಲ್ಲ ಎಂದರು.
ದೇಶವನ್ನು ಛಿದ್ರ ಮಾಡುವಂತಗ ಕೋಮುಶಕ್ತಿಗಳನ್ನು ಅಧಿಕಾರದಿಂದ ದೂರವಿಡಿ ಎಂದು ಜನತೆಯನ್ನು ಎಚ್ಚರಿಸಿದ ಸೋನಿಯಾ- ದೇಶವನ್ನು ಒಡೆಯುವ ಪ್ರಯತ್ನಗಳನ್ನು ಸಂಘ ಪರಿವಾರದ ಘಟಕಗಳು ಮಾಡುತ್ತಿವೆ ಎಂದು ಆಪಾದಿಸಿದರು. ಸೋನಿಯಾ ಅವರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹಾಜರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications