ಬಿಜೆಪಿ ವಿರುದ್ಧ ವಾಗ್ದಾಳಿ ; ದೇವೇಗೌಡ ಪರ ಪ್ರಚಾರಕ್ಕೆ ವಿ.ಪಿ.ಸಿಂಗ್
ಬಿಜೆಪಿ ವಿರುದ್ಧ ವಾಗ್ದಾಳಿ ; ದೇವೇಗೌಡ ಪರ ಪ್ರಚಾರಕ್ಕೆ ವಿ.ಪಿ.ಸಿಂಗ್
ಸೋನಿಯಾ ವಿದೇಶಿ ಮೂಲದ ಟೀಕೆ ಅತಾರ್ಕಿಕ
ಸೋನಿಯಾ ಅವರ ವಿದೇಶಿ ಮೂಲದ ಬಗೆಗಿನ ಟೀಕೆಗಳು ಅರ್ಥಹೀನ. ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸದಂತೆ ಸೋನಿಯಾ ಅವರನ್ನು ನಿರ್ಬಂಧಿಸುವ ವಿಷಯ ಕೂಡ ಅತಾರ್ಕಿಕ ಎಂದು ವಿ.ಪಿ.ಸಿಂಗ್ ಹೇಳಿದರು. ಅವರು ಏ.15ರ ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ನೈಜ ನಾಗರಿಕರು ಹಾಗೂ ಸಂದೇಹಾಸ್ಪದ ನಾಗರಿಕರು ಎಂದು ವರ್ಗೀಕರಿಸುವುದು ಸಾಧ್ಯವಿಲ್ಲ . ಭಾರತದ ನಾಗರಿಕರು ಯಾರು ಬೇಕಾದರೂ ಅತ್ಯುನ್ನತ ಹುದ್ದೆಗಳನ್ನು ಹೊಂದಬಹುದು. ಪ್ರಧಾನಿ ಹುದ್ದೆ ಭಾರತೀಯ ಪೌರತ್ವಕ್ಕಿಂಥ ದೊಡ್ಡದೇನೂ ಅಲ್ಲ ಎಂದು ವಿ.ಪಿ.ಸಿಂಗ್ ಹೇಳಿದರು.
ವಿದೇಶಿ ಮೂಲದ ವ್ಯಕ್ತಿಯ ದೇಶಭಕ್ತಿ ಸಂದೇಹಾಸ್ಪದವಾಗಿದ್ದಾಗ, ಅಥವಾ ಆ ವ್ಯಕ್ತಿಯಿಂದ ದೇಶಕ್ಕೆ ಆತಂಕವಿದೆ ಎಂದಾದಲ್ಲಿ ಪೌರತ್ವ ನೀಡಿದ್ದಾದರೂ ಏಕೆ ಎಂದು ಸಿಂಗ್ ತರ್ಕ ಮಂಡಿಸಿದರು.
ಯಾರು ಯಾರೊಂದಿಗಿರುತ್ತಾರೆ ಎನ್ನುವುದನ್ನು ಹೇಳಲಿಕ್ಕಾಗುತ್ತಿಲ್ಲ . ಆದರೆ, ಲೋಕಸಭೆಯಲ್ಲಿ ಬಿಜೆಪಿಯ ಬಲ ಹೆಚ್ಚಂತೂ ಆಗುವುದಿಲ್ಲ . ಬಿಹಾರ ಹಾಗೂ ಉತ್ತರಪ್ರದೇಶದಲ್ಲಿ ಕಳಕೊಳ್ಳುವುದನ್ನು ತುಂಬಿಕೊಳ್ಳುವುದು ಸುಲಭವಲ್ಲ ಎಂದು ಚುನಾವಣಾ ಪೂರ್ವ ಪರಿಸ್ಥಿತಿಯನ್ನು ವಿ.ಪಿ.ಸಿಂಗ್ ವಿಶ್ಲೇಷಿಸಿದರು.
ಬಿಜೆಪಿ ಕ್ಷಮೆ ಕೇಳಲಿ
ಅಯೋಧ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯನ್ನು ಮಾಜಿ ಪ್ರಧಾನಿ ತೀವ್ರವಾಗಿ ಟೀಕಿಸಿದರು. ಮಾತುಕತೆ ಅಥವಾ ನ್ಯಾಯಾಲಯದ ಮಧ್ಯಸ್ಥಿಕೆಯ ಮೂಲಕವೇ ಅಯೋಧ್ಯೆ ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕು ಎನ್ನುವ ಇಂದಿನ ನಿಲುವನ್ನು ಬಿಜೆಪಿ 15 ವರ್ಷಗಳ ಹಿಂದೆಯೇ ಹೊಂದಿದ್ದಲ್ಲಿ , ದೇಶ ದಹಿಸುವುದನ್ನು ತಪ್ಪಿಸಬಹುದಿತ್ತು . ಈ ಪ್ರಮಾದಕ್ಕಾಗಿ ಹಾಗೂ ಈವರೆಗಿನ ಜೀವಹಾನಿಗಾಗಿ ಬಿಜೆಪಿ ಕ್ಷಮೆ ಯಾಚಿಸಬೇಕು ಎಂದರು.
ಕಾಂಗ್ರೆಸ್ ಹಾಗೂ ಬಿಜೆಪಿ ಹೊರತಾದ ತೃತೀಯರಂಗದ ಅವಶ್ಯಕತೆ ದೇಶಕ್ಕೆ ತುಂಬಾ ಇದೆ ಎಂದು ವಿ.ಪಿ.ಸಿಂಗ್ ಹೇಳಿದರು. ಆದರೆ, ಇಂಥದೊಂದು ಶಕ್ತಿಯ ಒಗ್ಗೂಡಿಸುವಿಕೆಯ ನಾಯಕತ್ವವನ್ನು ಅನಾರೋಗ್ಯದ ಕಾರಣ ತಮ್ಮಿಂದ ವಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. (ಅನಾರೋಗ್ಯದಿಂದ ಬಳಲುತ್ತಿರುವ ವಿ.ಪಿ.ಸಿಂಗ್ ಡಯಾಲಿಸಿಸ್ ಹಾಗೂ ಕೀಮೊಥೆರಪಿಗೆ ಒಳಗಾಗುತ್ತಿದ್ದಾರೆ).
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ವಿ.ಪಿ.ಸಿಂಗ್- ರೈತರು, ಕಾರ್ಮಿಕರು ಹಾಗೂ ಅಶಕ್ತ ವರ್ಗಗಳ ಹಿತಾಸಕ್ತಿಗಾಗಿ ದೇವೇಗೌಡರು ಸಂಸತ್ತಿನಲ್ಲಿರಬೇಕು ಎಂದರು. ದೇವೇಗೌಡರು ಯಾವುದೇ ಸಂದರ್ಭದಲ್ಲೂ ಬಿಜೆಪಿಯಾಂದಿಗೆ ಕೈಗೂಡಿಸುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications