ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಪ್ರಧಾನಿ ವಾಜಪೇಯಿಗೆ ಸಾಯಿಬಾಬಾ ಆಶೀರ್ವಾದ

By Staff
|
Google Oneindia Kannada News

ಬೆಂಗಳೂರಲ್ಲಿ ಪ್ರಧಾನಿ ವಾಜಪೇಯಿಗೆ ಸಾಯಿಬಾಬಾ ಆಶೀರ್ವಾದ
ಬಾಬಾ ಜೊತೆ ವಾಜಪೇಯಿ 55 ನಿಮಿಷ ಚರ್ಚೆ

ಬೆಂಗಳೂರು : ಚುನಾವಣಾ ಪ್ರಚಾರದ ಭರಾಟೆಯಲ್ಲಿ ಹಗಲು ರಾತ್ರಿಗಳ ವ್ಯತ್ಯಾಸ ಕಳಕೊಂಡಿರುವ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಸಾಯಿಬಾಬಾ ಆಶ್ರಮದಲ್ಲಿ ಬುಧವಾರ ಒಂದು ಗಂಟೆ ಕಾಲ ಕಳೆದರು.

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಸತ್ಯ ಸಾಯಿಬಾಬಾ ಆಶ್ರಮಕ್ಕೆ ಏಪ್ರಿಲ್‌ 14 ರ ಬುಧವಾರ ಭೇಟಿ ಕೊಟ್ಟ ಪ್ರಧನಿ ವಾಜಪೇಯಿ, ಬಾಬಾ ಅವರ ಆಶೀರ್ವಾದ ಪಡೆದರು. ಪ್ರಧಾನಿಗಳ ಕುಟುಂಬದ ಎಲ್ಲ ಸದಸ್ಯರಿಗೂ ಬಾಬಾ ಆಶೀರ್ವಾದ ಮಾಡಿದರು. ಸುಮಾರು 55 ನಿಮಿಷಗಳ ಕಾಲ ಪ್ರಧಾನಿ ಹಾಗೂ ಸಾಯಿಬಾಬಾ ಮಾತುಕತೆ ನಡೆಸಿದರು.

ಸಾಯಿಬಾಬಾ ಭೇಟಿಯ ಸಂದರ್ಭದಲ್ಲಿ ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ, ಅಳಿಯ ರಂಜನ್‌ ಭಟ್ಟಾಚಾರ್ಯ ಮತ್ತು ಮೊಮ್ಮಗಳು ನಿಹಾರಿಕಾ ಹಾಜರಿದ್ದರು. ಪ್ರಧಾನಿ ಪರಿವಾರದೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಅನಂತ್‌ ಕುಮಾರ್‌ ಕೂಡ ಸಾಯಿಬಾಬಾ ಆರ್ಶೀರ್ವಾದ ಪಡೆದರು.

ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ವಾಜಪೇಯಿ ಬೆಂಗಳೂರಿಗೆ ಆಗಮಿಸಿದ್ದರು. ಮಂಗಳವಾರ ಸಂಜೆ ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ವಾಜಪೇಯಿ ಮಾತನಾಡಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X