ಅಬ್ಬಬ್ಬಾ ನಾನ್ನೂರು ! ಸಾಲು ವಿಶ್ವದಾಖಲೆಗಳ ಬರೆದ ಬ್ರಿಯಾನ್ಲಾರ
ಅಬ್ಬಬ್ಬಾ ನಾನ್ನೂರು ! ಸಾಲು ವಿಶ್ವದಾಖಲೆಗಳ ಬರೆದ ಬ್ರಿಯಾನ್ಲಾರ
ಲಾರಾ, ಎರಡು ತ್ರಿಶತಕಕ್ಕಿಂತ ಹೆಚ್ಚಿನ ರನ್ ಬಾರಿಸಿದ ಎರಡನೆ ಆಟಗಾರ
ಇದು ವೀಕ್ಷಕ ವಿವರಣೆಗಾರನ ಹರ್ಷಚಿತ್ತನುಡಿ. ಮತ್ತದೇ ದಾಖಲೆ, ಆದೇ ದಾಂಡಿಗ, ಅದೇ ಅಂಗಣ, ಮತ್ತದೇ ತಂಡದೆದುರರು. ಹತ್ತು ವರ್ಷಗಳ ಬಳಿಕ ಮರುಕಳಿಸಿದ ವಿಶ್ವ ವಿಕ್ರಮದ ಇನ್ನಿಂಗ್ಸ್ ಅದು . ಮತ್ತದೇ ನೆನಪು...
ವೆಸ್ಟಿಂಡೀಸ್ ತಂಡದ ನಾಯಕ ಬ್ರಿಯಾನ್ ಲಾರಾ ಅಜೇಯ 400ರನ್ನುಗಳನ್ನು ಟೆಸ್ಟ್ ಕ್ರಿಕೆಟ್ನ ಒಂದೇ ಇನ್ನಿಂಗ್ಸ್ನಲ್ಲಿ ದಾಖಲಿಸಿದ್ದಾಗ ಮೈದಾನದ ತುಂಬಾ ಹರ್ಷದ ಹುಚ್ಚುಹೊಳೆ. ಮೈದಾನಕ್ಕೆ ನುಗ್ಗಿದ ಅಭಿಮಾನಿಗಳು, ಎದುರಾಳಿ ಇಂಗ್ಲೆಂಡ್ ತಂಡದ ಆಟಗಾರರು ವಿಶ್ವವಿಕ್ರಮ ಮೆರೆದ ಆಟಗಾರನನ್ನು ಅಭಿನಂದಿಸಿದರು.
ಈಮುನ್ನ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಹೆಸರಿನಲ್ಲಿದ್ದ 380 ರನ್ನುಗಳ ಗರಿಷ್ಠ ಮೊತ್ತದ ದಾಖಲೆಯನ್ನು ಲಾರಾ ಮತ್ತೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ನ ಮೂರನೇ ದಿನದಲ್ಲಿ ಭೋಜನ ವಿರಾಮಕ್ಕೆ ಮುನ್ನ ಬಾಲನ್ನು ಸಿಕ್ಸ್ಗೆ ಎತ್ತುವ ಮೂಲಕ ದಾಖಲೆ ಸರಿದೂಗಿಸಿದ ಲಾರಾ, ಮತ್ತವರ ಬೌಲಿಂಗಿನಲ್ಲೇ ಬೌಂಡರಿ ಬಾರಿಸುವ ಮೂಲಕ ಇತಿಹಾಸ ಬರೆದರು.
ಈ ನಾಲ್ಕುನೂರರ ಮೂಲಕ ಲಾರಾ ಎರಡು ತ್ರಿಶತಕಕ್ಕಿಂತ ಹೆಚ್ಚಿನ ರನ್ ಬಾರಿಸಿದ ಎರಡನೆ ಆಟಗಾರ ಎಂಬ ಗೌರವಕ್ಕೂ ಪಾತ್ರರಾದರು. ಈ ಹಿಂದೆ ಬ್ರಾಡ್ಮನ್ ಮಾತ್ರ ಎರಡು ತ್ರಿಶತಕ ಬಾರಿಸಿದ್ದರು. ಆದರೆ ಲಾರಾರ ವೈಯುಕ್ತಿಕ ಗಳಿಕೆ ಅವರಿಗಿಂತ ಹೆಚ್ಚು.
ಪ್ರಸ್ತುತ ಅಂಗಣದಲ್ಲಿರುವ ಆಟಗಾರರ ಪೈಕಿ ಅತಿ ಹೆಚ್ಚು ರನ್ ಗಳಿಸಿದ(9657)ಆಟಗಾರ. ಆಸ್ಟ್ರೇಲಿಯಾದ ಹೇಡನ್ 380 ದಾಖಲಿಸಿದ್ದು ಜಿಂಬಾಬ್ವೆ ವಿರುದ್ಧ . ಕೊಲ್ಕತ್ತಾದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಮಣಿಸಿದಾಗ ಹಾಗೂ ತವರು ನೆಲದಲ್ಲೇ ಆಸ್ಟ್ರೇಲಿಯಾ ಭಾರತದಿಂದ ಸೋಲುಂಡಾಗ ಹುಚ್ಚೆದ್ದು ಕುಣಿದಿದ್ದ ಲಾರಾಗೆ ಭಾರತವೆಂದರೆ ಅಭಿಮಾನ. ಈ ಅಭಿಮಾನದ ಕ್ರಿಕೆಟಿಗನಿಗೆ ಇನ್ನಷ್ಟು ಸಾಧನೆಯ ಗರಿಗಳು ಸಲ್ಲಲಿ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications