ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲುಗು ಭಾಷಿಕರ ಸೆಳೆಯಲು ಬಿಜೆಪಿಯಿಂದ ನಟಿ ವಿಜಯಶಾಂತಿ ಗಾಳ

By Staff
|
Google Oneindia Kannada News

ತೆಲುಗು ಭಾಷಿಕರ ಸೆಳೆಯಲು ಬಿಜೆಪಿಯಿಂದ ನಟಿ ವಿಜಯಶಾಂತಿ ಗಾಳ
ಬಿಜೆಪಿ ಅಭ್ಯರ್ಥಿಗಳಿಗೆ ಓಟು ನೀಡುವ ಮೂಲಕ ವಾಜಪೇಯಿ ಅವರನ್ನು ಬೆಂಬಲಿಸಲು ಮನವಿ

ತುಮಕೂರು : ಒಂದೆಡೆ ಅರಿ ಭಯಂಕರ ನಟ ಸಾಯಿಕುಮಾರ್‌ ಮಿಂಚಿನೋಪಾದಿಯಲ್ಲಿ ಸಂಚರಿಸುತ್ತಾ ವೀರಾವೇಶದಿಂದ ಭಾಷಣ ಮಾಡುತ್ತಿದ್ದರೆ, ಇನ್ನೊಂದೆಡೆ ದಕ್ಷಿಣ ಭಾರತದ ಖ್ಯಾತನಟಿ ವಿಜಯಶಾಂತಿ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಇಬ್ಬರ ಮಾತೂ ಒಂದೇ-ಬಿಜೆಪಿಗೆ ಓಟು ಕೊಡಿ.

ನಟಿ ವಿಜಯಶಾಂತಿ ಏ.11ರ ಭಾನುವಾರ ತುಮಕೂರು ಜಿಲ್ಲೆಯ ಪಾವಗಡ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಿದರು.

ಪ್ರಧನಿ ವಾಜಪೇಯಿ ಅವರ ನೇತೃತ್ವದಲ್ಲಿ ಭಾರತ ಪ್ರಕಾಶಿಸುತ್ತಿದ್ದು , ದೇಶದ ಮುಂದಿನ ದಿನಗಳ ಭವಿಷ್ಯಕ್ಕಾಗಿ ವಾಜಪೇಯಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸುವಂತೆ ವಿಜಯಶಾಂತಿ ಜನರನ್ನು ಕೋರಿದರು. ಬಿಜೆಪಿಯ, ಪಾವಗಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸೋಮ್ಲಾನಾಯ್ಕ ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಪಿ.ಮೂಡಲಗಿರಿಯಪ್ಪನವರನ್ನು ಗೆಲ್ಲಿಸುವಂತೆ ವಿಜಯಶಾಂತಿ ಅಭಿಮಾನಿಗಳಲ್ಲಿ ಮನವಿ ಮಾಡಿದರು.

ತೆಲುಗಿನಲ್ಲಿ ಮಾತನಾಡಿದ ವಿಜಯಶಾಂತಿಯವರ ಮಾತನ್ನು ಚಪ್ಪಾಳೆ ತಟ್ಟುವ ಮೂಲಕ ಅಭಿಮಾನಿಗಳು ಆಸ್ವಾದಿಸಿದರು. ಈ ಪ್ರಚಾರ ಸಭೆಗಳಲ್ಲಿ ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್‌ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X