ಬೆಳಗಾವಿ, ಬೆಂಗಳೂರುಗಳಲ್ಲಿ ಮಂಗಳವಾರ ವಾಜಪೇಯಿ ಭಾಷಣ
ಬೆಳಗಾವಿ,
ಬೆಂಗಳೂರುಗಳಲ್ಲಿ
ಮಂಗಳವಾರ
ವಾಜಪೇಯಿ
ಭಾಷಣ
ಪಕ್ಷದ
ಪ್ರಚಾರಕ್ಕೆ
ಪ್ರಧಾನಿ
ಆಟಲ್
ಬಿಹಾರಿ
ವಾಜಪೇಯಿ
ಕರ್ನಾಟಕಕ್ಕೆ
ಕರ್ನಾಟಕದ ಉತ್ತರ ಭಾಗವಾದ ಬೆಳಗಾವಿ ಮತ್ತು ದಕ್ಷಿಣದ ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಅವರು ಚುನಾವಣಾ ಭಾಷಣ ಮಾಡಲಿದ್ದಾರೆ. ಇದರಿಂದ ಬಿಜೆಪಿಯ ಚುನಾವಣಾ ಪ್ರಕ್ರಿಯೆಗೆ ಹೊಸ ಹುರುಪು ಬರಲಿದೆ ಎಂದು ಪಕ್ಷದ ವಕ್ತಾರ ತಿಳಿಸಿದ್ದಾರೆ.
ಉತ್ತರ ಕರ್ನಾಟಕದ ಗಡಿ ಪ್ರದೇಶವಾದ ಬೆಳಗಾವಿಯಲ್ಲಿ ಮಂಗಳವಾರ ಬೆಳಗ್ಗೆ ಚುನಾವಣಾ ಸಭೆಯನ್ನು ಉದ್ದೇಶಿಸಿ ವಾಜಪೇಯಿ ಮಾತನಾಡುವರು. ಮಂಗಲವಾರ ಸಂಜೆ ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯ ಅನೇಕ ರಾಷ್ಟ್ರೀಯ ನಾಯಕರುಗಳು ರಾಜ್ಯದಲ್ಲಿ ಪ್ರಚಾರ ಕಾರ್ಯಕೈಗೊಳ್ಳಲಿದ್ದಾರೆ.
ಬಿಜೆಪಿ ಕರ್ನಾಟಕವನ್ನು ‘ದಕ್ಷಿಣದ ಹೆಬ್ಬಾಗಿಲು’ ಎಂದು ಪರಿಗಣಿಸಿದೆ. ಉಪಪ್ರಧಾನಿ ಎಲ್.ಕೆ. ಅಡ್ವಾಣಿಯ ‘ಭಾರತ ಉದಯ ಯಾತ್ರೆ’ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಸಂಚರಿಸಿತ್ತು. ರಾಜ್ಯ ಬಿಜೆಪಿ ಘಟಕವು ‘ಕರ್ನಾಟಕ ಉದಯ ಯಾತ್ರೆ’ಯನ್ನುೂ ಹಮ್ಮಿಕೊಂಡಿದೆ. ಅಷ್ಟಲ್ಲದೆ ತೆಲುಗು ಪ್ರಭಾವ ಹೆಚ್ಚಾಗಿರುವ ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ಸಾಯಿಕುಮಾರ್ ಮತ್ತು ವಿಜಯಶಾಂತಿ ಪ್ರಚಾರ ಮಾಡುತ್ತಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು