ಸಂಸ್ಕೃತ ವಿದ್ವಾನ್ ರಂಗನಾಥ ಶರ್ಮರಿಗೆ ‘ದೇರಾಜೆ ಪ್ರಶಸ್ತಿ’ ಪುರಸ್ಕಾರ
ಸಂಸ್ಕೃತ ವಿದ್ವಾನ್ ರಂಗನಾಥ ಶರ್ಮರಿಗೆ ‘ದೇರಾಜೆ ಪ್ರಶಸ್ತಿ’ ಪುರಸ್ಕಾರ
ಇಂದಿನವರು ನೀತಿ ಬಿಟ್ಟು ಬೇರೆಲ್ಲ ಬರೆಯ ಬಲ್ಲವರು...
ಅವರು ಏಪ್ರಿಲ್11ರ ರಂದು ನಡೆದ ‘ದೇರಾಜೆ ಸೀತರಾಮಯ್ಯ ಸಂಸ್ಮರಣೆ ಪ್ರಶಸ್ತಿ ’ಸಮಾರಂಭದಲ್ಲಿ ಮಾತನಾಡುತ್ತಿದ್ದರು. 2004ನೇ ವರ್ಷದ ದೇರಾಜೆ ಪ್ರಶಸ್ತಿಯನ್ನು ಸಂಸ್ಕೃತ ವಿದ್ವಾಂಸ ಎನ್.ರಂಗನಾಥ ಶರ್ಮ ಅವರಿಗೆ ಪ್ರದಾನ ಮಾಡಲಾಯಿತು.
ಅಂದಿನ ಕಾಲದ ಕವಿಗಳಿಗೆ ನೀತಿ ಮುಖ್ಯವಾಗಿದ್ದರೆ. ಈಗಿನವರು ಅಂದೊಂದು ಬಿಟ್ಟು ಬೇರೆಲ್ಲ ಬರೆಯುತ್ತಾರೆ ಎಂದು ಪ್ರಶಸ್ತಿ ಸ್ವೀಕರಿಸಿ ರಂಗನಾಥ ಶರ್ಮ ನುಡಿದರು. ಉಮಾಕಾಂತ್ ಭಟ್ ಕರೆಕೈ ಶರ್ಮರ ಕುರಿತು ಅಭಿನಂದನಾ ಭಾಷಣ ಮಾಡಿದರು.
ಸರಕಾರವು ಜನರನ್ನು ಬಡಿದೆಬ್ಬಿಸುವ, ಅವರಲ್ಲಿ ಸಂಸ್ಕಾರ ತುಂಬುವ ಯಕ್ಷಗಾನಕ್ಕಾಗಿ , ಪ್ರತ್ಯೇಕ ಅಕಾಡೆಮಿ ಸ್ಥಾಪಿಸಬೇಕಾಗಿದೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಆಗ್ರಹಿಸಿದರು.
ಯಕ್ಷಕರ್ಮಿ ದೇರಾಜೆ ಕುರಿತ ಒಡನಾಡಿಗಳ ನೆನಪಿನ ಮಿಡಿತ...
ವಿಚಾರಣೆಯಾಂದಕ್ಕೆ ದೇರಾಜೆ ಸಾಕ್ಷಿಯಾಗಿ ಬಂದಿದ್ದರು. ಅಲ್ಲಿ ಎನ್.ಎಸ್.ಹೆಗಡೆ ನ್ಯಾಯಮೂರ್ತಿಯಾಗಿದ್ದರು. ಅವರ ಮುಂದೆ ವಿಚಾರಣೆಯಲ್ಲಿ ಪ್ರಸ್ತಾಪಿತವಾದ ‘ನೆರೆಕರೆ’ ಶಬ್ದಕ್ಕೆ ದೇರಾಜೆ ಕೊಟ್ಟ ವ್ಯಾಖ್ಯಾನ- ನೆರೆ ಎಂದರೆ ಪಕ್ಕದ , ಕರೆ ಎಂದರೆ ಕರೆದಾಗ ಕೇಳುವ ಕೊನೆಮನೆ. ಇದರೊಳಗೆ ಬರುವುದೆಲ್ಲ ‘ನೆರೆಕರೆ’. ದೇರಾಜೆ ಅವರ ಮಾತಿಗೆ ನ್ಯಾಯಮೂರ್ತಿ ಸಹ ನಕ್ಕರಂತೆ.
ಇನ್ನೊಂದು ಪ್ರಸಂಗ. ಒಂದು ಬಾರಿ ನಾಯಿ ತನ್ನ ಕಾಲು ನೆಕ್ಕಿತೆಂದು ದೇರಾಜೆ ‘ಥೂ ಮಂಗ ಜಾತಿಯವನೆ ನಡಿಯಾಚೆ’ ಎಂದು ಉಗಿದರು. ಇದನ್ನು ಕೇಳಿದ ಪತ್ನಿ ಅವರನ್ನು ಲೇವಡಿ ಮಾಡಲೆಂದು ‘ಅದು ನಾಯಿ. ಮಂಗನಲ್ಲ , ಸರಿ ನೋಡಿ’ ಎಂದು ನಕ್ಕರು. ಕ್ಷಣಾರ್ಧದಲ್ಲಿ ಹೊಮ್ಮಿದ ಅವರ ಉತ್ತರ ಹೀಗಿತ್ತು ‘ ಲೇ, ನಾಯಿಯನ್ನು ನಾಯಿ ಎಂದರೆ ಬೈದಂತಾಗುವುದೆ?’ .
ಇಂತಹ ಹಲವು ಘಟನೆ, ಸಾಧನೆ, ವ್ಯಕ್ತಿತ್ವದ ವರ್ಣನೆಯನ್ನು ನೆರೆದಿದ್ದ ಆವರ ಅಭಿಮಾನಿಗಳು ನೆನಪಿಸಿದರು. ಸಮಾರಂಭದ ಬಳಿಕ ಖ್ಯಾತ ಕಲಾವಿದರೊಂದಿಗೆ ಕೆರೆಮನೆ ಶಂಭು ಹೆಗಡೆ ತಾಳಮದ್ದಳೆ ನಡೆಸಿ ಕೊಟ್ಟರು.
ಎನ್.ಆರ್.ಕಾಲೋನಿಯ ಡಿವಿಜಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ದೇರಾಜೆ ಪುತ್ರ ಕೃಷ್ಣಮೂರ್ತಿ, ಪುತ್ರಿ ಇಂದಿರಾ ಜಾನಕಿ, ಒಡನಾಡಿ ಆನೆಕಾರ್ ಗಣಪಯ್ಯ, ಉದ್ಯಮಿ ದಯಾನಂದ್ ಎಸ್ ರಾವ್ ಮಾತನಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications