Get Updates
Get notified of breaking news, exclusive insights, and must-see stories!

‘ಕರ್ನಾಟಕ ಉದಯ ಯಾತ್ರೆ’ಯಲ್ಲಿ ಸಾಯಿಕುಮಾರ್‌ ಮಿಂಚಿಂಗು !

‘ಕರ್ನಾಟಕ ಉದಯ ಯಾತ್ರೆ’ಯಲ್ಲಿ ಸಾಯಿಕುಮಾರ್‌ ಮಿಂಚಿಂಗು !
ಜನವರಿ 26 ಹಾಗೂ ಆಗಸ್ಟ್‌ 15ಕ್ಕಿಂಥ ಮತದಾನ ನಡೆಯುವ ದಿನ ಮುಖ್ಯ

ಬೆಂಗಳೂರು : ರಾಜ್ಯ ಬಿಜೆಪಿ ಯ ‘ಕರ್ನಾಟಕ ಉದಯ ಯಾತ್ರೆ’ಯ ಮೊದಲ ದಿನ (ಏ.8) ಮಿಂಚಿದ್ದು ಬಿಜೆಪಿ ರಾಜ್ಯಾಧ್ಯಾಕ್ಷ ಎಚ್‌.ಎನ್‌. ಅನಂತಕುಮಾರ್‌ ಅಲ್ಲ ; ಡೈಲಾಗ್‌ ಕಿಂಗ್‌ ಎಂದು ಹೆಸರಾದ ನಟ ಸಾಯಿಕುಮಾರ್‌ !

ಹಾದಿಬದಿಯ ಸಭೆಗಳಲ್ಲಿ ತಮ್ಮ ಕಂಚಿನ ಕಂಠದಲ್ಲಿ ಬಿಜೆಪಿಯ ಸಂದೇಶವನ್ನು ಜನತೆಗೆ ಮುಟ್ಟಿಸುವಲ್ಲಿ ಯಶಸ್ವಿಯಾದ ಸಾಯಿಕುಮಾರ್‌, ತಮ್ಮ ತಾರಾ ವರ್ಚಸ್ಸಿನಿಂದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿದ್ದರು. ಸಾಯಿಕುಮಾರ್‌ ಅವರನ್ನು ನೋಡಲೆಂದೇ ಆನೇಕಲ್‌, ರಾಮಮೂರ್ತಿನಗರ, ಹೊಸಕೋಟೆ, ಭಾರತೀನಗರ, ಯಲಹಂಕ ಮುಂತಾದೆಡೆ ಜನರು ಗುಂಪುಗೂಡಿದ್ದರು.

ಮಹಿಳೆಯರು ಹಾಗೂ ಯುವ ಜನತೆಯನ್ನು ಪ್ರಚೋದಿಸುಂತೆ ಮಾತನಾಡಿದ ಸಾಯಿಕುಮಾರ್‌ ಬಿಜೆಪಿಗೆ ಓಟು ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದರು. ಕ್ಯಾಸೆಟ್‌ನಂತೆ, ಪ್ರತಿಸ್ಥಳದಲ್ಲೂ ತಮ್ಮ ಮಾತುಗಳನ್ನು ಸಾಯಿಕುಮಾರ್‌ ಪುನರುಚ್ಛರಿಸಿದ್ದು ಅವರ ಭಾಷಣದ ಮತ್ತೊಂದು ವಿಶೇಷ.

ಪವಿತ್ರ ಜನ್ಮಭೂಮಿ, ಹಿಂದುತ್ವ ತತ್ವ ಮತ್ತು ಸಹಿಷ್ಣುತೆ, ಬಿಜೆಪಿಯ ಸಮರ್ಥ ನಾಯಕತ್ವ ಮುಂತಾದ ವಿಷಯಗಳ ಬಗೆಗೆ ಸಾಯಿಕುಮಾರ್‌ ಭಾವುಕರಾಗಿ ಮಾತನಾಡಿದರು. ಜನವರಿ 26 ಹಾಗೂ ಆಗಸ್ಟ್‌ 15ಕ್ಕಿಂಥ ಮತದಾನ ನಡೆಯುವ ದಿನ ಅತ್ಯಂತ ಮುಖ್ಯವಾಗಿದ್ದು , ಅಂದು ಎಲ್ಲ ಮತದಾರರೂ ತಪ್ಪದೆ ಮತ ಚಲಾಯಿಸಬೇಕು ಎಂದೂ ಅವರು ಹೇಳಿದರು.

50 ವರ್ಷಗಳಲ್ಲಿ ಕಾಂಗ್ರೆಸ್‌ ಮಾಡಲಿಕ್ಕೆ ಸಾಧ್ಯವಾಗದ ಸಾಧನೆಯನ್ನು ಪ್ರಧಾನಿ ವಾಜಪೇಯಿ ಐದು ವರ್ಷಗಳಲ್ಲಿ ಮಾಡಿದ್ದಾರೆ. ವಾಜಪೇಯಿ ನಾಯಕತ್ವ ದೇಶಕ್ಕೆ ಮುಂದೆ ಕೂಡ ಅಗತ್ಯ ಎಂದು ಪ್ರತಿಪಾದಿಸಿದ ಸಾಯಿಕುಮಾರ್‌, ರಾಜ್ಯದ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು ಟೀಕಿಸಿದರು. ರಾಜ್ಯದಲ್ಲಿ ರೈತ ರೋದಿಸುತ್ತಿದ್ದಾನೆ. ಆದರೆ ರೈತನ ಆಕ್ರಂದನವನ್ನು ನಿರ್ಲಕ್ಷಿಸಿರುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಹೈಟೆಕ್‌ ಜಪದಲ್ಲಿ ಮುಳುಗಿದ್ದಾರೆ. ಈ ಕಾರಣದಿಂದಾಗಿಯೇ ಮದ್ದೂರು ಕ್ಷೇತ್ರದಿಂದ ಪಲಾಯನಗೈದು ಚಾಮರಾಜಪೇಟೆಗೆ ಬಂದಿದ್ದಾರೆ ಎಂದು ಸಾಯಿಕುಮಾರ್‌ ದೂರಿದರು.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+