‘ಪ್ರೆಸ್’ ಮಹಾತ್ಮೆ ! ಬೆಂಗಳೂರಲ್ಲಿ ಪ್ರೆಸ್ಸಿಗರ ಸಂಖ್ಯೆ- ಸಮಸ್ಯೆ ಹೆಚ್ಚಳ
‘ಪ್ರೆಸ್’ ಮಹಾತ್ಮೆ ! ಬೆಂಗಳೂರಲ್ಲಿ ಪ್ರೆಸ್ಸಿಗರ ಸಂಖ್ಯೆ- ಸಮಸ್ಯೆ ಹೆಚ್ಚಳ
ಲೇಬಲ್ ಅಂಟಿಸಿ ಪೊಲೀಸ್ಗೆ ಸಿಕ್ಕಿಬಿದ್ದ ಖದೀಮ
ಬೆಂಗಳೂರು ಮಹಾನಗರ ಪೊಲೀಸ್ ಕಮೀಷನರ್ ಮರಿಸ್ವಾಮಿ- ಪ್ರೆಸ್ ಲೇಬಲ್ ಅಂಟಿಸಿದ ವಾಹನ ಚಾಲಕರಲ್ಲಿ ಸರಿಯಾದ ಗುರುತಿನ ಚೀಟಿ (ಐಡಿ) ಇದೆಯೋ ಇಲ್ಲವೋ ಎನ್ನುವ ತಪಾಸಣೆ ಬಿಗಿಗೊಳಿಸಲು ಹಾಗೂ ಪ್ರೆಸ್ ಬರಹ ದುರುಪಯೋಗಪಡಿಸಿಕೊಳ್ಳುವವರ ಮೇಲೆ ಕಠಿಣ ಕ್ರಮ ಕಾನೂನು ಜರುಗಿಸುವಂತೆ ಇತ್ತೀಚೆಗಷ್ಟೇ ಪೊಲೀಸರಿಗೆ ಸೂಚನೆ ನೀಡಿದ್ದರು. ಹಾಗಿದ್ದರೂ ಪ್ರೆಸ್ಸಿಗರ ಸಂಖ್ಯೆಯೇನೂ ಕಡಿಮೆಯಾಗಿಲ್ಲ . ಪ್ರೆಸ್ ಲೇಬಲ್ ಅಂಟಿಸಿಕೊಂಡು ರಾಜಾರೋಷವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯಾಬ್ಬನನ್ನು ಮಾರ್ಚ್ 8 ರಂದು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಪಾಪೇಗೌಡ ಆಲಿಯಾಸ್ ನಾಗರಾಜ್(36) ಎನ್ನುವ ಬಂಧಿತ ಆರೋಪಿ ಚಾಮರಾಜಪೇಟೆಯ ವಾಸಿ. ನಾಗರಾಜ್ ಸೆಂಟ್ರಲ್ ಪೊಲೀಸರ ಮಿತಿಯಾಳಗೆ ಬರುವ ಜಾಗದಿಂದ ನಕಲು ಕೀ ಬಳಸಿ ಟಾಟಾ ಸುಮೋವನ್ನು ಕಳುವು ಮಾಡಿದ್ದ. ನಂಬರ್ ಪ್ಲೇಟನ್ನು ಬದಲಾಯಿಸಿ ಸುಮೋದ ಗ್ಲಾಸಿನ ಮೇಲೆ ಪ್ರೆಸ್ ಎಂದು ಲೇಬಲ್ ಅಂಟಿಸಿಕೊಂಡು ಬೆಂಗಳೂರು ಮತ್ತು ಕೋಲಾರದ ನಡುವೆ ಟ್ರಿಪ್ ಹೊಡೆಯುತ್ತಿದ್ದ.
ಇದಕ್ಕೂ ಮೊದಲು ಪೀಣ್ಯ, ಶೇಷಾದ್ರಿಪುರಂ ಮತ್ತು ಉಪ್ಪಾರಪೇಟೆ ಪೊಲೀಸರಿಂದ ದ್ವಿಚಕ್ರ ವಾಹನಗಳ ಕಳುವಿಗೆ ಸಂಬಂಧಿಸಿದಂತೆ ನಾಗರಾಜ್ ಬಂಧಿತನಾಗಿದ್ದ. ಇತ್ತೀಚೆಗಷ್ಟೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ನಾಗರಾಜ್ ಮತ್ತೊಮ್ಮೆ ಪೊಲೀಸರ ಅತಿಥಿಯಾಗಿದ್ದಾನೆ. ಪ್ರೆಸ್ ಮಹಾತ್ಮೆ !
ಪ್ರೆಸ್ ಲೇಬಲ್ನಲ್ಲಿ ಅಂಥಾದ್ದೇನಿದೆ?
ಇದೆ!
ಅಪರಾತ್ರಿಯಲ್ಲಿ ಕುಡಿದು ವಾಹನ ಚಾಲನೆ ಮಾಡುವಾಗ, ವಾಹನದ ಸರಿಯಾದ ದಾಖಲೆ ಪತ್ರಗಳಿಲ್ಲದಿದ್ದಾಗ, ಲೈಸೆನ್ಸ್ ಇಲ್ಲದಾಗ- ಆಗೆಲ್ಲ ಪ್ರೆಸ್ ಐಡಿ ತೋರಿಸಿದರೆ ಟ್ರಾಫಿಕ್ ಪೊಲೀಸರು ಅವರನ್ನು ಬಿಟ್ಟು ಬಿಡುತ್ತಾರೆ. ಅವರಿಂದಲೂ ನೂರೋ, ಐವತ್ತೋ ಕೇಳಿದರೆ, ಅದನ್ನು ನಾಳೆ ಪೇಪರಿನಲ್ಲಿ ಹಾಕಿ ಬಿಟ್ಟರೆಂಬ ಭಯ ಪೊಲೀಸರಿಗೆ! ಅವರಂದುಕೊಂಡಂತೆ ಏನೂ ನಡೆಯದು ಎನ್ನುವುದು ಬೇರೆ ಮಾತು.
ಪ್ರೆಸ್ ಎಂದು ಲೇಬಲ್ ಅಂಟಿಸಿ ಓಡಾಡುವ ಇಂತಹ ಖದೀಮರೂ, ಲಂಚ ತಿಂದು ತೇಗುವ ಪೊಲೀಸರಿಂದ- ನಿಜವಾಗಿಯೂ ಪ್ರೆಸ್ನಲ್ಲಿ ನಿಯತ್ತಿನಿಂದ ದುಡಿದು ಮಧ್ಯರಾತ್ರಿಯಲ್ಲಿ ಆಫೀಸಿನಿಂದ ನೇರ ಮನೆಗೆ ಹೊರಡುವ ಸಭ್ಯರಿಗೆ ಮಾತ್ರ ತೊಂದರೆ ತಪ್ಪಿದ್ದಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications