ಕುಟುಂಬ ರಾಜಕಾರಣ: ಬಂಗಾರಪ್ಪ , ದೇವೇಗೌಡ, ಶಾಮನೂರು!
ಕುಟುಂಬ ರಾಜಕಾರಣ: ಬಂಗಾರಪ್ಪ , ದೇವೇಗೌಡ, ಶಾಮನೂರು!
ರಾಜ್ಯ ರಾಜಕಾರಣಕ್ಕೂ ಮೆರಗು ತಂದ ಮನೆ-ಮನೆ ಮಹಾಭಾರತ
ಜಾತ್ಯತೀತ ಜನತಾದಳದ ಮುಖಂಡ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಕನಕಪುರಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇದೇ ಲೋಕಸಭಾ ಕ್ಷೇತ್ರದ ರಾಮನಗರ ವಿಧಾನ ಸಭಾ ಕ್ಷೇತ್ರದಿಂದ ಅವರ ಪುತ್ರ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಇನ್ನೋರ್ವ ಪುತ್ರ ರೇವಣ್ಣ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಈ ಮಕ್ಕಳು ಜಾತ್ಯತೀತ ಜನತಾದಳದ ಆಗುಹೋಗುಗಳ ನಿರ್ಣಾಯಕ ಶಕ್ತಿ ಎನ್ನುವುದು ಗಮನಾರ್ಹ.
1999ರ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಅವರಿಬ್ಬರು ಪುತ್ರರು ಸೋತು ಸುಣ್ಣವಾಗಿದ್ದರು. ದೇವೇಗೌಡರು ಹಾಸನದಲ್ಲಿ ಸೋತರೆ, ಕುಮಾರಸ್ವಾಮಿ ಸಾತನೂರಿನಿಂದ ಹಾಗೂ ರೇವಣ್ಣ ಹೊಳೆನರಸೀಪುರದಲ್ಲಿ ಸೋತಿದ್ದರು. ಆದರೆ ‘ಮಣ್ಣಿನ ಮಗ ’ ದೇವೇಗೌಡ ಕನಕಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದು ಬಂದರು. ಮತ್ತೆ ಕನಕಪುರದಿಂದಲೇ ದೇವೇಗೌಡರು ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಉದಯ ಟೀವಿಯ ಹೆಣ್ಣುಮಗಳು ತೇಜಸ್ವಿನಿ ಕನಕಪುರದಲ್ಲಿ ಗೌಡರ ಎದುರಾಳಿ.
ಕಾಂಗ್ರೆಸ್ ಪಾಳಯದಲ್ಲಿ ....
ಅಪ್ಪ-ಮಗ ತಮ್ಮ ಕ್ಷೇತ್ರವನ್ನು ಅದಲು-ಬದಲು ಮಾಡಿಕೊಂಡಿರುವ ವಿಶೇಷ ಪ್ರಸಂಗಕ್ಕೆ ಕಾಂಗ್ರೆಸ್ ಸಾಕ್ಷಿಯಾಗಿದೆ. ಈ ಅದಲುಬದಲಿನ ಅಪ್ಪ-ಮಗ, ದಾವಣಗೆರೆ ಲೋಕಸಭಾ ಸದಸ್ಯ ಶ್ಯಾಮನೂರು ಶಿವಶಂಕರಪ್ಪ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ. ಈ ಚುನಾವಣೆಯಲ್ಲಿ ಮಗ ಲೋಕಸಭೆಗೆ ಸ್ಪರ್ಧಿಸಿದರೆ ಅಪ್ಪ ಶ್ಯಾಮನೂರು ಶಿವಶಂಕರಪ್ಪ ವಿಧಾನಸಭೆ ಆಕಾಂಕ್ಷಿ. ಇದು ಕುಟುಂಬದೊಳಗಿನ ಅದ್ಭುತ ಹೊಂದಾಣಿಕೆ.
ಕಳೆದ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಂಗೇರ ಅನುಜರ ಮಧ್ಯೆ ಸ್ಪರ್ಧೆಯೇರ್ಪಟ್ಟಿತ್ತು. ಅದು ಈ ವರ್ಷವು ಮುಂದುವರಿದಿದ್ದು ಸತತ ಮೂರನೇ ವರ್ಷಕ್ಕೆ ದಾಪುಗಾಲು ಹಾಕುತ್ತಿದೆ.
ಇನ್ನು ಸೊರಬದ ಸಮಾಚಾರ. ಶಾಮನೂರು ಕುಟುಂಬದಲ್ಲಿ ಸಾಧ್ಯವಾದ ಹೊಂದಾಣಿಕೆ ಬಂಗಾರಪ್ಪನವರ ಕುಟುಂಬದಲ್ಲಿ ಸಾಧ್ಯವಾಗದೆ ಹೋಗಿರುವುದರಿಂದ ಸೊರಬದ ಚುನಾವಣೆಗೆ ವಿಶೇಷ ರಂಗೇರಿದೆ. ಇಲ್ಲಿ ಕಾಂಗ್ರೆಸ್ನಿಂದ ಕುಮಾರ್ ಬಂಗಾರಪ್ಪ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯಿಂದ ಮಧು ಬಂಗಾರಪ್ಪ ಸ್ಪರ್ಧಿಸುತ್ತಿದ್ದಾರೆ. ಬಂಗಾರಪ್ಪನವರ ಬೆಂಬಲ ಮಧು ಬಂಗಾರಪ್ಪನವರಿಗೆ. ಇನ್ನು ಬಂಗಾರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹುರಿಯಾಳು. ಕುಮಾರ್ ಬಂಗಾರಪ್ಪ ಅಪ್ಪನ ವಿರುದ್ಧ ಪ್ರಚಾರಕ್ಕೆ ತಯಾರಾಗಿ ನಿಂತಿದ್ದಾರೆ.
ಈ ಕುಟುಂಬ ರಾಜಕೀಯದಲ್ಲಿ ಯಾರಿಗೆ ಗೆಲುವು ಯಾರಿಗೆ ಸೋಲು ಎನ್ನುವುದು ಜನತೆಯಲ್ಲಿ ಕುತೂಹಲ ಮೂಡಿಸಿದೆ.
ಬಂಗಾರಪ್ಪ ಈಟೀವಿಯ ಕಾರ್ಯಕ್ರಮವೊಂದರಲ್ಲಿ - ಅಪ್ಪ ಮಗ, ಅಣ್ಣ ತಮ್ಮ ಯಾರನ್ನೂ ಈ ಪ್ರಜಾಪ್ರಭುತ್ವ ಬಿಡುವುದಿಲ್ಲ ಎಂದಿದ್ದರು ಬಂಗಾರಪ್ಪ . ಅನುಭವದ ಮಾತಲ್ಲವೆ ?
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications