ಚಾಮರಾಜಪೇಟೇಲಿ ಪ್ರಮೀಳಾ ನೇಸರ್ಗಿ ಬಂಡಾಯದ ಬಾವುಟ
ಚಾಮರಾಜಪೇಟೇಲಿ
ಪ್ರಮೀಳಾ
ನೇಸರ್ಗಿ
ಬಂಡಾಯದ
ಬಾವುಟ
ಮುಖ್ಯಮಂತ್ರಿ
ಚಂದ್ರು
ನಾಮಪತ್ರ
ವಾಪಸ್ಸಾತಿಗೆ
ಒತ್ತಾಯ
ಪ್ರಮೀಳಾ ನೇಸರ್ಗಿ ಅವರಿಗೆ ಈ ಮುನ್ನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗಿತ್ತು . ಆದರೆ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಅವರ ಸ್ಪರ್ಧೆಯಿಂದ ಬದಲಾದ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೇಸರ್ಗಿ ಅವರ ಜಾಗದಲ್ಲಿ ನಟ ಮುಖ್ಯಮಂತ್ರಿ ಚಂದ್ರು ಅವರನ್ನು ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ಈ ತೀರ್ಮಾನದ ವಿರುದ್ಧ ಭುಗಿಲೆದ್ದಿರುವ ಪ್ರಮೀಳಾ ನೇಸರ್ಗಿ ಈಗ ಬಂಡಾಯದ ಬಾವುಟ ಹಾರಿಸಿದ್ದಾರೆ.
ಮಹಿಳೆಯರಿಗೆ ಟಿಕೆಟ್ ನೀಡಿರುವುದೇ ಕಡಿಮೆ. ಇಂಥ ಸಂದರ್ಭದಲ್ಲಿ ನನಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ . ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಧೈರ್ಯ ಹಾಗೂ ಸಾಮರ್ಥ್ಯ ನನಗಿದೆ ಎನ್ನುವುದನ್ನು ಪಕ್ಷ ಮರೆಯಬಾರದು ಎಂದು ಪ್ರಮೀಳಾ ನೇಸರ್ಗಿ ಗುರುವಾರ (ಏ.1) ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದರು.
ತಮ್ಮ ಸ್ಪರ್ಧೆಗೆ ಅಭಿಮಾನಿಗಳು ಒತ್ತಾಯಿಸುತ್ತಿದ್ದು , ಮುಖ್ಯಮಂತ್ರಿ ಚಂದ್ರು ಅವರು ನಾಮಪತ್ರ ವಾಪಸ್ಸು ಪಡೆಯುವ ವಿಶ್ವಾಸ ತಮಗಿದೆ ಎಂದು ಪ್ರಮೀಳಾ ನೇಸರ್ಗಿ ವಿಶ್ವಾಸ ವ್ಯಕ್ತಪಡಿಸಿದರು. ಮತ್ತೊಬ್ಬ ನಟ ಅನಂತನಾಗ್ ಜಾತ್ಯತೀತ ಜನತಾದಳದಿಂದ ಚಾಮರಾಜಪೇಟೆ ಕಣದಲ್ಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004