Get Updates
Get notified of breaking news, exclusive insights, and must-see stories!

‘ನಾಗಪ್ಪ ಅಪಹರಣ’ ಸಂಬಂಧ ಸತ್ಯಮಂಗಲಂನಲ್ಲಿ ಇಬ್ಬರ ಬಂಧನ

‘ನಾಗಪ್ಪ ಅಪಹರಣ’ ಸಂಬಂಧ ಸತ್ಯಮಂಗಲಂನಲ್ಲಿ ಇಬ್ಬರ ಬಂಧನ
ಕುಡ್ಡಲೂರಿಗೆ ಸೇರಿದ ಆರೋಪಿಗಳು ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಗಳು

ಕೊಯಮತ್ತೂರು : ನರಹಂತಕ ವೀರಪ್ಪನ್‌ ಸೆರೆಯಲ್ಲಿ ಹತ್ಯೆಗೀಡಾದ ಕರ್ನಾಟಕದ ಮಾಜಿ ಸಚಿವ ನಾಗಪ್ಪನವರ ಅಪಹರಣ ಪ್ರಕರಣದ ಸಂಬಂಧ ತಮಿಳುನಾಡಿನ ಎಸ್‌ಟಿಎಫ್‌ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಈರೋಡು ಜಿಲ್ಲೆಯ ಸತ್ಯಮಂಗಲಂನ ಬಸ್‌ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ಕೊಳಂಜಿ ಮತ್ತು ಮುತ್ತುಕುಮಾರ್‌ ಎಂಬುವರನ್ನು ಏ.1ರ ರಾತ್ರಿ ಬಂಧಿಸಲಾಗಿದೆ. ಈ ಇಬ್ಬರು ನಾಗಪ್ಪನವರ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಂಧಿತರು ತಮಿಳುನಾಡು ವಿಮೋಚನಾ ಪಡೆಗೆ ಸೇರಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಕುಡ್ಡಲೂರಿಗೆ ಸೇರಿದ ಈ ಇಬ್ಬರು ಆರೋಪಿಗಳು ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಜಿ ಸಚಿವ ನಾಗಪ್ಪನವರನ್ನು ನರಹಂತಕ ವೀರಪ್ಪನ್‌ ಆಗಸ್ಟ್‌ 25, 2002ರಂದು ಅಪಹರಿಸಿದ್ದ . ನಾಗಪ್ಪನವರ್‌ ವೀರಪ್ಪನ್‌ ಸೆರೆಯಲ್ಲಿಯೇ 2002ರ ಡಿಸೆಂಬರ್‌ ತಿಂಗಳಲ್ಲಿ ಸಾವಿಗೀಡಾಗಿದ್ದರು.

(ಪಿಟಿಐ)

ಮುಖಪುಟ / ವೀರಪ್ಪನ್‌

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+