ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಹೆಚ್‌ಪಿ ‘ಬೆಂಕಿ ಬಿರುಗಾಳಿ’ ತೊಗಾಡಿಯಾ ಏ.6 ರಂದು ಹುಬ್ಬಳ್ಳಿಗೆ

By Staff
|
Google Oneindia Kannada News

ವಿಹೆಚ್‌ಪಿ ‘ಬೆಂಕಿ ಬಿರುಗಾಳಿ’ ತೊಗಾಡಿಯಾ ಏ.6 ರಂದು ಹುಬ್ಬಳ್ಳಿಗೆ
ಸುಪ್ರಿಂಕೋರ್ಟ್‌ ತೀರ್ಪು ಐತಿಹಾಸಿಕ -ಕೃಷ್ಣ ಬಣ್ಣನೆ

ಹುಬ್ಬಳ್ಳಿ : 2003ರಲ್ಲಿ ಮಂಗಳೂರಿಗೆ ವಿಶ್ವಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್‌ ತೊಗಾಡಿಯಾ ಅವರ ಪ್ರವೇಶವನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸುಪ್ರಿಂಕೋರ್ಟ್‌ ಎತ್ತಿ ಹಿಡಿದಿರುವ ಸಂದರ್ಭದಲ್ಲೇ , ತೊಗಾಡಿಯಾ ಅವರ ರಾಜ್ಯ ಭೇಟಿಯ ಮತ್ತೊಂದು ಕಾರ್ಯಕ್ರಮ ನಿಗದಿಯಾಗಿದೆ.

ಡಾ.ಪ್ರವೀಣ್‌ ತೊಗಾಡಿಯಾ ಏಪ್ರಿಲ್‌ 6 ರಂದು ಹುಬ್ಬಳ್ಳಿಗೆ ಭೇಟಿ ಕೊಡುವರು ಎಂದು ಭಜರಂಗದಳದ ದಕ್ಷಿಣ ಭಾರತದ ಸಂಯೋಜಕ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ.

ಲೋಕಸಭೆ ಹಾಗೂ ್ಫವಿಧಾನಸಭೆ ಚುನಾವಣೆಗಳು, ರಾಮಜನ್ಮ ಭೂಮಿ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ತೊಗಾಡಿಯಾ ಅವರು ಚರ್ಚಿಸುವರು ಎಂದು ಮುತಾಲಿಕ್‌ ಹೇಳಿದ್ದಾರೆ.

ಐತಿಹಾಸಿಕ ತೀರ್ಪು : ಮಂಗಳೂರು ಪ್ರವೇಶಿದಂತೆ ತೊಗಾಡಿಯಾ ಅವರಿಗೆ ನಿಷೇಧ ಹೇರಿದ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿರುವ ಸುಪ್ರಿಂಕೋರ್ಟ್‌ ತೀರ್ಪನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸ್ವಾಗತಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ - ಸುಪ್ರಿಂಕೋರ್ಟ್‌ ತೀರ್ಪು ಐತಿಹಾಸಿಕ ಎಂದು ಬಣ್ಣಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X