Get Updates
Get notified of breaking news, exclusive insights, and must-see stories!

ನೀರಿಗಾಗಿ ಹಾಹಾಕಾರ ; ಮಾ.31ರಂದು ರಬಕವಿ-ಬನಹಟ್ಟಿ ಬಂದ್‌

ನೀರಿಗಾಗಿ ಹಾಹಾಕಾರ ; ಮಾ.31ರಂದು ರಬಕವಿ-ಬನಹಟ್ಟಿ ಬಂದ್‌
ಸ್ಥಳೀಯ ಸಮಸ್ಯೆಗಳ ಮರೆತು ಚುನಾವಣಾ ರಾಜಕಾರಣದಲ್ಲಿ ಮುಳುಗಿದ ನಾಯಕರು

ಬನಹಟ್ಟಿ : ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವಲ್ಲಿ ರಾಜಕಾರಣಿಗಳ ವೈಫಲ್ಯವನ್ನು ಪ್ರತಿಭಟಿಸಿ ವಿವಿಧ ಸಾಮಾಜಿಕ ಸಂಘಟನೆಗಳು ಮಾ.31ರಂದು ರಬಕವಿ-ಬನಹಟ್ಟಿ ಬಂದ್‌ಗೆ ಕರೆ ನೀಡಿವೆ.

ಸ್ಥಳೀಯ ಮುನಿಸಿಪಾಲಿಟಿ ನಾಯಕರು ಮುಂಬರುವ ಸಾರ್ವಜನಿಕ ಚುನಾವಣೆಗಳ ವ್ಯವಹಾರಗಳಲ್ಲಿ ಮುಳುಗಿಹೋಗಿದ್ದಾರೆ. ಅವರಿಗೆ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತೆಯೂ ಇಲ್ಲ , ಚಿಂತನೆಯೂ ಇಲ್ಲ . ಈ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಮಾ.31ರಂದು ರಬಕವಿ- ಬನಹಟ್ಟಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ರಬಕವಿ-ಬನಹಟ್ಟಿ ನಾಗರಿಕರ ವೇದಿಕೆಯ ಅಧ್ಯಕ್ಷ ವೀರಣ್ಣ ಕೊಪ್ಪದ್‌ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಬಕವಿ ಹಾಗೂ ಬನಹಟ್ಟಿ ಅವಳಿ ಪಟ್ಟಣಗಳ ಜನತೆ ಪ್ರತಿದಿನವೂ ನೀರಿಗಾಗಿ ಹೋರಾಟವನ್ನೇ ನಡೆಸುತ್ತಿದ್ದಾರೆ. ದಿನದ ಬಹುಭಾಗವನ್ನು ನೀರನ್ನು ಸಂಗ್ರಹಿಸುವಲ್ಲೇ ಜನರು ಕಳೆಯುತ್ತಿದ್ದಾರೆ. ಪಟ್ಟಣದಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು , ಅವರಿಗೆ ಬಟ್ಟೆಗಳನ್ನು ತೊಳೆಯಲು ಹಾಗೂ ಡೈಯಿಂಗ್‌ಗೆ ಹೆಚ್ಚಿನ ಪ್ರಮಾಣದ ನೀರು ಬೇಕಾಗಿದೆ. ಆದರೆ ನೀರಿನ ಕೊರತೆಯಿಂದ ನೇಕಾರರ ಉದ್ಯಮ ಕೂಡ ತೊಂದರೆ ಎದುರಿಸುತ್ತಿದೆ ಎಂದು ಕೊಪ್ಪದ್‌ ಹೇಳಿದ್ದಾರೆ.

ಒಂದು ದಿನದ ಬಂದ್‌ ಕೇವಲ ಸಾಂಕೇತಿಕ ಪ್ರತಿಭಟನೆ ಮಾತ್ರ. ಈ ಬಂದ್‌ಗೆ ಸ್ಥಳೀಯ ನಾಯಕರು ಗಮನ ಕೊಡದಿದ್ದಲ್ಲಿ , ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೊಪ್ಪದ್‌ ಎಚ್ಚರಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+