ಕೈ ಹಿಡಿಯುವವ ಒಳ್ಳೆಯವನಾಗಿರಲಿ ! ಕೇರಳದಲ್ಲಿ ಕಾಮಣ್ಣನ ಪೂಜೆ
ಕೈ ಹಿಡಿಯುವವ ಒಳ್ಳೆಯವನಾಗಿರಲಿ ! ಕೇರಳದಲ್ಲಿ ಕಾಮಣ್ಣನ ಪೂಜೆ
ಮಾರ್ಚ್ 25ರಿಂದ 9 ದಿನಗಳ ಕಾಲ ಕನ್ಯೆಯರಿಂದ ಮನ್ಮಥನ ಪೂಜೆ
ಮಾರ್ಚ್ 25ರಿಂದ ಪ್ರಾರಂಭವಾಗಿರುವ ಪೂರೋತ್ಸವಂ ಎಂಬ ಒಂಭತ್ತು ದಿನಗಳ ಈ ಹಬ್ಬದಲ್ಲಿ ಕಾಮದೇವ ಮದನನಿಗೆ ಪೂಜೆ ಪುರಸ್ಕಾರ. ಈ ನವದಿನಗಳ ಆಚರಣೆ ನವ ಯುವತಿಯರಿಗೆ ಸಡಗರದ ಹಬ್ಬ. ಈ ಹಬ್ಬವನ್ನಾಚರಿಸುವ ಮೂಲಕ ಜನರು ಕಾಮದೇವನನ್ನು ಆಹ್ವಾನಿಸುತ್ತಾರೆ. ಬಹುತೇಕ ದೇವಿ ಮಂದಿರಗಳಲ್ಲಿ ಹುಡುಗಿಯರು ಪೂರೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಆಚರಣೆ ಮಲಬಾರ್ ಪ್ರದೇಶಗಳಲ್ಲಿನ ಒಂಭತ್ತು ದಿನಗಳ ಆಕರ್ಷಣೆಯ ಕೇಂದ್ರವಾಗಿದೆ.
ಪ್ರತಿವರ್ಷವೂ ನಡೆಯುವ ಈ ಹಬ್ಬವು ಮಲಯಾಳಂ ಪಂಚಾಗದ ಪ್ರಕಾರ ಕಾರ್ತಿಕ ನಕ್ಷತ್ರದಿಂದ ಪೂರಂ ನಕ್ಷತ್ರದವರೆಗೆ ನಡೆಯುತ್ತದೆ. ಪುರಾಣದಲ್ಲಿ ದೇವಕನ್ಯೆಯರು ಮದನನ ಪುನರ್ಜನ್ಮ ಕೋರಿ ಶಿವನನ್ನು ಪ್ರಾರ್ಥಿಸಿದಂತೆ ಎಲ್ಲ ಹೆಂಗಳೆಯರೂ ಪ್ರಾರ್ಥಿಸುತ್ತಾರೆ. ಆ ಪ್ರಾರ್ಥನೆಯನ್ನು ಅವರು ಮೀನಂ ಎಂದು ಕರೆಯುತ್ತಾರೆ.
ಹಬ್ಬದ ಸಮಯದಲ್ಲಿ ಹೆಣ್ಣು ಮಕ್ಕಳು ತಂತಮ್ಮ ಮನೆಯನ್ನು ತಳಿರು-ತೋರಣ ಹೂಗಳಿಂದ ಅಲಂಕರಿಸಿ ಕಾವದೇವನ ಕೃಪೆ ಕೋರುತ್ತಾ ತಮಗೆ ಒಳ್ಳೆಯ ವರ(ಗಂಡ) ಸಿಗಲಿ ಎಂದು ವರ ಕೋರುತ್ತಾರೆ. ಇಂತಹ ಹಲವಾರು ವಿಶಿಷ್ಟವಾದ ಆಚರಣೆಗಳಿಂದ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳು ಪೂರಕ್ಕಲಿಯಂತಹ ವಿಶೇಷ ಸಾಂಸ್ಕೃತಿಕ ನೆಲೆಗಟ್ಟಿನ ಆಚರಣೆಗಳಿಗೆ ಗುರುತಿಸಲ್ಪಡುತ್ತವೆ.
ಭಾರತೀಯ ಆಚರಣೆಗಳು ಎಷ್ಟೊಂದು ವೈವಿಧ್ಯಮಯವಾಗಿರುತ್ತವೆ, ಅಲ್ಲವೇ ? ಆ ಕಾರಣದಿಂದಲೇ ಭಾರತ ಸಾಂಸ್ಕೃತಿಕವಾಗಿ ಸಮೃದ್ಧಿಯ ದೇಶ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications